ಅಪಾಯದ ಅಂಚಿನಲ್ಲಿ ತುಳು ಸಂಸ್ಕೃತಿ (ಭಾಗ-1) &(ಭಾಗ-2). Tulu Culture by Raviraj Anchan.ಅಪಾಯದ ಅಂಚಿನಲ್ಲಿ ತುಳು ಸಂಸ್ಕೃತಿ (ಭಾಗ-1)
ಗುರುವಾರ - ಅಕ್ಟೋಬರ್ -28-2010
ತುಳು ಭಾಷೆಯ ಅಭಿಮಾನ ಬೆಳೆಯುತ್ತಿದೆ. ತುಳು ಸಮ್ಮೇಳನಗಳು ಅಖಿಲ ಭಾರತ ಸಮ್ಮೇಳನಗಳೆಂದು ಕರೆಸಿಕೊಂಡಿವೆ. ತುಳುವಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಜನಾತ್ಮಕ ಅಂತೆಯೇ ಸೃಜನೇತರ ಬೆಳೆ ತೆಗೆಯುವ ಕೃಷಿ ನಡೆದಿದೆ. ಕನ್ನಡ ಲಿಪಿಯನ್ನು ಬಳಸಿ ತುಳು ಭಾಷೆಯಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಪ್ರಶಸ್ತಿ ದೊರೆಯುವ ಸಂಪ್ರದಾಯ ಆರಂಭವಾಗಿದೆ. ತುಳುವಿಗೆ ಲಿಪಿ ಇದೆಯೇ? ಹೀಗೆ ಹುಬ್ಬೇರಿಸಿ ಕೇಳುವವರು ಅಬ್ಬರ ತಣ್ಣಗಾಗುತ್ತಿದೆ.
ಹಾಗೆ ನೋಡಿದರೆ ಇಂಗ್ಲಿಷ್ ಭಾಷೆಗೆ ಲಿಪಿಯಿಲ್ಲವಲ್ಲ! ಅದು ರೋಮನ್ ಲಿಪಿಯಿಂದ ಜನ ಮನ್ನಣೆ ಪಡೆಯಲಿಲ್ಲವೇ? ಹಿಂದಿ, ಮರಾಠಿ, ಗುಜರಾತಿ ಭಾಷೆಗಳಿಗೆ, ಸ್ವತಂತ್ರ ಲಿಪಿಯಿಲ್ಲ ವಲ್ಲ! ಈ ಎಲ್ಲಾ ಪ್ರಶ್ನೆ ವಿಸ್ಮಯಗಳು ತುಳು ವಿರೋಧಿಗಳ ಬಾಯಿ ಮುಚ್ಚಿಸಿವೆ. ಹೀಗೆಂದ ಮಾತ್ರಕ್ಕೆ ತುಳುವಿಗೆ ಲಿಪಿ ಇರಲೇ ಇಲ್ಲವೆಂದಲ್ಲ. ಹಳೆ ಮಲೆಯಾಳಿ ಲಿಪಿಗೆ ಸರಿ ಹೊಂದುವ ತುಳು ಲಿಪಿಯೊಂದು ಹಿಂದೆ ಇದ್ದುದನ್ನು ವಿದ್ವಾಂಸರು ಒಪ್ಪುತ್ತಾರೆ. ಆದರೆ ಆ ಲಿಪಿಯಲ್ಲಿ ಬರೆದ ತುಳು ಸಾಹಿತ್ಯ ಕೃತಿಗಳಾಗಲಿ, ಶಾಸನಗಳಾಗಲಿ ಈವರೆಗೆ ದೊರೆತಿಲ್ಲ.
ಒಂದು ಜನಾಂಗವನ್ನು ನಿರ್ವೀರ್ಯಗೊಳಿಸಬೇಕಾದರೆ ಮೊದಲು ಅವರ ಭಾಷೆಯನ್ನು ಕೊಲ್ಲಬೇಕು. ಆ ಬಳಿಕ ಅವರ ಸಂಸ್ಕೃತಿಯ ಮೇಲೆ ಹಲ್ಲೆ ನಡೆಸಬೇಕು. ಇದೆಲ್ಲಾ ಇಂದು ತುಳುವರೆಂದು ಕರೆಸಿಕೊಳ್ಳುವ ವಲಸಿಗ ರಿಂದ ಕ್ರಿ.ಶ. 4ನೆಯ ಶತಮಾನದಿಂದ ನಡೆಯು ತ್ತಲೇ ಬಂದಿದೆ. ತುಳು ಲಿಪಿಯನ್ನು ನಾಶಗೊಳಿಸಿ ದವರು ಯಾರೆಂಬ ಚಾರಿತ್ರಿಕ ಸಂಗತಿ ಇನ್ನಷ್ಟೇ ಸಂಶೋಧನೆಯಿಂದ ಬೆಳಕು ಕಾಣಬೇಕಾಗಿದೆ. ತುಳು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಇದೆಲ್ಲಾ ಅಗತ್ಯವಾಗಿ ನಡೆಯಬೇಕಾದದ್ದೆ.
ಆದರೆ ಕೇವಲ ಭಾಷೆಯೊಂದನ್ನು ಮಾತ್ರ ಬೆಳೆಸಿ ತುಳು ಸಂಸ್ಕೃತಿಯನ್ನು ನಿರ್ಲಕ್ಷಿಸುವುದು ಸರಿಯೇ? ಹಿಂದೊಮ್ಮೆ ಒಂದು ಉನ್ನತ ಆದ ರ್ಶದ ಬದುಕಿಗೆ ಚಾಲನೆ ನೀಡಿದ ಮಾತ್ರವಲ್ಲದೆ ಇಂದಿಗೂ ಮಾನವರ ಬದುಕಿಗೆ ನೆರವಾಗಬಲ್ಲ; ಪ್ರಗತಿ ಪರವೂ, ಜನ ಪರವೂ ಆಗಿರಬಲ್ಲ ತುಳು ಸಂಸ್ಕೃತಿ ಈಗ ತುಳುವರಿಂದಲೇ ಅಪಾ ಯದ ಅಂಚಿನಲ್ಲಿದೆ. ಇಂದಿನ ಸಂಕ್ರಮಣ ಕಾಲದಲ್ಲಿ ತುಳು ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ.
ತುಳು ಮಾತೃಭಾಷೆಯವರು ತುಳು ಭಾಷೆಯ ಉಳಿವಿಗಾಗಿ ಪ್ರಯತ್ನಿಸುತ್ತಾರೆ. ಅಂತೆಯೇ ತುಳು ಸಂಸ್ಕೃತಿಯ ಉಳಿವಿಗಾಗಿ ತುಳುವರೆಲ್ಲಾ ಪ್ರಯತ್ನಿಸಬೇಕು. ಹಾಗಿದ್ದರೆ ತುಳುವರೆಂದರೆ ಯಾರು? ಇಂದು ಕುಂದಾಪುರ ತಾಲೂಕಿನಲ್ಲಿ ಕನ್ನಡ ಮಾತನಾಡುವವರು, ಕಾಸರಗೋಡು ತಾಲೂಕಿನಲ್ಲಿ ಮಲೆಯಾಳಿ ಮಾತನಾಡುವವರು ತುಳುವರಲ್ಲವೇ? ಅನ್ಯಾನ್ಯ ಕಾರಣಗಳಿಂದ ತುಳುನಾಡನ್ನು ಬಿಟ್ಟು ದೇಶ, ವಿದೇಶಗಳಿಗೆ ವಲಸೆ ಹೋಗಿ ಈಗ ತುಳು ಮರೆ ತವರನ್ನು ತುಳುವರೆಂದು ಕರೆಯುವುದು ಸರಿಯೇ? ಇಂತಹ ಹಲವಾರು ಪ್ರಶ್ನೆಗಳಿಗೆ ಸಮಾಧಾನದ ಉತ್ತರವಿತ್ತು ತುಳುವರನ್ನು ಬೆಸೆಯುವ ಕಸುವು ಇಂದಿಗೂ ತುಳು ಸಂಸ್ಕೃತಿಯಲ್ಲಿದೆ.
ತುಳುವರು ತುಳು ಸಂಸ್ಕೃತಿಯ ವೈಶಿಷ್ಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳ ಬೇಕಾದರೆ; ಅವರು ತುಳು ಸಂಸ್ಕೃತಿ ಕೇವಲ ಪ್ರದೇಶ, ಭಾಷೆ, ಮತವಾಚಕ ಸಂಸ್ಕೃತಿಗಳೆಂಬ ಭ್ರಮೆಯಿಂದ ಹೊರ ಬರಬೇಕು. ತುಳು ಸಂಸ್ಕೃತಿ ‘ಜನಾಂಗವಾಚಕ’ ಸಂಸ್ಕೃತಿಯೆಂದು ತಿಳಿಯ ಬೇಕು. ಆಗ ಕನ್ನಡಿಗರಿಗೆ ತುಳುನಾಡಿನ ಬೇಡಿಕೆ ಸಾಂಸ್ಕೃತಿಕ ಬೇಡಿಕೆಯಾಗಿ ಮಾತ್ರ ಕಾಣುತ್ತದೆ. ಅದು ರಾಜಕೀಯದ ಪ್ರತ್ಯೇಕತಾವಾದಿ ಚದುರಂಗದಾಟವೆಂಬ ಗುಮಾನಿ ತಪ್ಪುತ್ತದೆ.
ಅಂತೆಯೇ ರಾಜಸ್ಥಾನದ ‘ಬಿಲ್’, ಮಧ್ಯ ಪ್ರದೇಶದ ‘ಶಾಂತಲಿ’ ಜನಾಂಗಗಳ ಸಾಂಸ್ಕೃತಿಕ ಅಧ್ಯಯನದ ಜೊತೆಗೆ ಅಮೆರಿಕ, ಆಫ್ರಿಕ, ಆಸ್ಟ್ರೇಲಿಯ ದೇಶಗಳಲ್ಲೂ ಮಾತೃ ಪ್ರಧಾನ ವ್ಯವಸ್ಥೆಯ ಸಂಸ್ಕೃತಿಗಳನ್ನು ತುಳು ಸಂಸ್ಕೃತಿ ಯೊಂದಿಗೆ ತೌಲನಿಕವಾಗಿ ಅಭ್ಯಾಸ ಮಾಡಿ ದಾಗ; ತುಳುವಿನ ಸಾಂಸ್ಕೃತಿಕ ಬೇರುಗಳ ಹರವು ಆಳ ಮತ್ತು ತುಳು ಸಾಂಸ್ಕೃತಿಕ ವೃಕ್ಷದ ಎತ್ತರಗಳನ್ನು ಕಂಡು ಹಿಡಿಯಲು ಸಾಧ್ಯವಾದೀತು.
ಈವರೆಗೆ ನಮ್ಮ ಸಾಂಸ್ಕೃತಿಕ ಹುಡುಕಾಟ ವಿಂದ್ಯಾದ್ರಿಯ ದಕ್ಷಿಣ ಪ್ರದೇಶಕ್ಕೆ ಹೆಚ್ಚಾಗಿ ಸೀಮಿತಗೊಂಡದ್ದನ್ನು ಇಲ್ಲಿ ಗಮನಿಸಬೇಕಾಗಿದೆ. ಇವೆಲ್ಲಕ್ಕೂ ಮೂಲದಲ್ಲಿ ತುಳು ಸಂಸ್ಕೃತಿ ಆರ್ಯ, ದ್ರಾವಿಡ, ವೈದಿಕ ಇತ್ಯಾದಿ ವರ್ತುಲಗಳಿಂದ ಹೊರಬಂದು ಅದು ಅವೆಲ್ಲಕ್ಕೂ ಪೂರ್ವದಲ್ಲಿದ್ದ ಮೂಲ ಭಾರತೀಯ ಸಂಸ್ಕೃತಿಯ ಒಂದಂಗ ವೆನ್ನುವುದರ ಎಚ್ಚರ ಅಗತ್ಯ. ತುಳು ಸಂಸ್ಕೃತಿಯ ವೈಶಿಷ್ಟಗಳನ್ನು ಅರಿಯದೆ ತುಳುವರ ಸರ್ವಾಂಗೀಣ ಪ್ರಗತಿ ಸಾಧ್ಯವಿಲ್ಲ.
ತುಳುವರು ನಿಸರ್ಗದ ಆರಾಧಕರು. ಬದುಕಿನ ನೆರವಾಗಬಲ್ಲ ಎಲ್ಲವನ್ನೂ ಶ್ರದ್ಧೆಯಿಂದ ಕಾಣು ವುದು, ತುಳು ಸಂಸ್ಕೃತಿಯ ವೈಶಿಷ್ಟಗಳಲ್ಲಿ ಒಂದಾಗಿದೆ. ತುಳುವರು ನಾಸ್ತಿಕರಲ್ಲ. ಅಂತೆಯೇ ಅವರು ಮೂರ್ತಿ ಪೂಜಕರಂತೂ ಅಲ್ಲವೇ ಅಲ್ಲ. ಇಂದಿಗೂ ತುಳುನಾಡಿನ ಮೂಲ ಸಂಸ್ಕೃತಿಯ ಕೆಲವು ಅಂಶಗಳನ್ನು ‘ಕೊರಗ’ ಜನಾಂಗದಲ್ಲಿ ಕಾಣಬಹುದು.
ಮರದ ಪೂಜೆ ಇಂದಿಗೂ ‘ಕೊರಗ’ ಜನಾಂಗದಲ್ಲಿ ಪ್ರಚಲಿತವಾಗಿದೆ. ತುಳುವರ ನಾಗಬನಗಳು ಇದಕ್ಕೆ ಪುರಾವೆಯಾಗಿವೆ. ನಾಗಬನ ನಾಗಸ್ಥಾನವಾಗಿ ಇಂದು ಬಿಂಬ ಪ್ರತಿಷ್ಠೆಯ ಮಟ್ಟಕ್ಕೆ ತಿರುಗಿದ್ದು ನಂತರದ ಬೌದ್ಧ ಮತ್ತು ವೈದಿಕ ಸಂಸ್ಕೃತಿಯ ಪ್ರಭಾವದಿಂದ ಮಾತ್ರ. ಈಗ ‘ಮರ, ಮಾರಮ್ಮನಾಗಿ, ಮಾರಿ ಕಾಂಬೆಯಾಗಿ, ಮಾಲಿಂಗೇಶ್ವರಿಯಾಗಿ ಕೊನೆಯಲ್ಲಿ ಮಹಿಷಾಸುರ ಮರ್ದಿನಿಯಾಗಿ ಬೆಳೆಯಿತು’ ಎಂಬ ಡಾ. ಅರವಿಂದ ಮಾಲಗತ್ತಿಯವರ ಅಭಿಪ್ರಾಯ ಇಲ್ಲಿ ಗಮನಾರ್ಹ.
ರವಿ. ರಾ. ಅಂಚನ್
ಅಪಾಯದ ಅಂಚಿನಲ್ಲಿ ತುಳು ಸಂಸ್ಕೃತಿ (ಭಾಗ-2)
ಶುಕ್ರವಾರ - ಅಕ್ಟೋಬರ್ -29-2010
ಹಿಂದೊಮ್ಮೆ ಕಾಯಕವನ್ನೇ ಪೂಜೆಯೆಂದು ಬಗೆಯುವ ವರ್ಣಾಶ್ರಮದ ತಾರತಮ್ಯವಿಲ್ಲದ ಸಂಸ್ಕೃತಿಯೇ ತುಳು ಸಂಸ್ಕೃತಿ, ‘ತುಳುನಾಡಿನಲ್ಲಿ ಶೂದ್ರರಿರಲೇ ಇಲ್ಲ. ನನ್ನ ಮನೆಯ ಪೂಜೆಗೆ, ಮದುವೆಗೆ ಯಾ ಇತರ ಧಾರ್ಮಿಕ ಕೆಲಸಗಳಿಗೆ ಬ್ರಾಹ್ಮಣರನ್ನು ಕರೆಯುವ ಕ್ರಮವೇ ಇರಲಿಲ್ಲ’ ಎಂದು ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಬೆಂಗಳೂರಿನ ತುಳುಕೂಟದ ವಿಚಾರ ಗೋಷ್ಠಿ ಯಲ್ಲಿ ಹೇಳಿರುವುದು ನೂರಕ್ಕೆ ನೂರು ಪಾಲು ಸತ್ಯ. ಕುಲ ಮೂಲದ ‘ಬಳಿ’ಯ ಮುಖೇನ ಕುಟುಂಬದ ನೆಲೆಯನ್ನು ಗುರುತಿಸುವ ತುಳುವ ರಲ್ಲಿ ವೃತ್ತಿ ಸ್ವಾತಂತ್ರವಿತ್ತು. ಹುಟ್ಟನ್ನು ಆಧರಿಸಿ ಕುಲ ಕಸುಬು ಬೆಳೆದಿರಲಿಲ್ಲ; ವಿವಾಹದಲ್ಲಿ ‘ಬಳಿ’ ಅಂದರೆ ‘ಬರಿ’ಯ ಪರಿಗಣನೆ ನಡೆಯುತ್ತಿತ್ತು.
ದೀಪಾವಳಿ ಹಬ್ಬ ತುಳುವರಿಗೆ ಒಂದು ವಿಶಿಷ್ಟ ಬಗೆಯ ಪ್ರಕೃತಿ ಪೂಜೆಯ ಹಬ್ಬವಾಗಿದೆ. ದೀಪಾವಳಿಯ ಪ್ರಥಮ ದಿನದ ಹಬ್ಬಕ್ಕೆ ‘ಸತ್ತವರ ಹಬ್ಬ’ ಎಂದು ಕರೆಯುತ್ತಾರೆ. ಹೀಗೆಂದಾಕ್ಷಣ ಗಾಬರಿಯಾಗುವುದು ಸಹಜ. ಯಾಕೆಂದರೆ ಸತ್ತವರೊಡನೆ ‘ಭೂತ’ ಶಬ್ದವನ್ನು ಅನಿಷ್ಟ ಮತ್ತು ಕೆಟ್ಟದರ ಜೊತೆಯಲ್ಲಿ ಸಮೀಕರಿಸಲಾಗಿದೆ. ಇದು ಸಂಸ್ಕೃತಿಯ ತಪ್ಪಲ್ಲ. ಅಪಪ್ರಚಾರ ಅನಾ ಚಾರವನ್ನೇ ಸತ್ಯವೆಂದು ನಂಬುವ ತುಳುವ ಅಜ್ಞಾನ ಮಾತ್ರ. ‘ಸತ್ತವರೆಲ್ಲಾ ಕುಲೆಗಳಾಗು ತ್ತಾರೆ ವೌಲ್ಯಕ್ಕೆ ಹೋರಾಡಿದವರು ಮಾತ್ರ ಭೂತಗಳಾಗುತ್ತಾರೆ’ ಎಂಬ ಡಾ. ಕೆ.ಚಿನ್ನಪ್ಪ ಗೌಡರ ಮಾತು ಇಲ್ಲಿ ನೆನಪಾಗುತ್ತದೆ. ಒಟ್ಟಿನಲ್ಲಿ ತುಳುವರಿಗೆ ಪುನರ್ಜನ್ಮದಲ್ಲಿ ನಂಬಿಕೆಯಿಲ್ಲ. ಕೆಲವು ತುಳುವರು ಜೈನರಾದಾಗ ಪುನರ್ಜನ್ಮದ ನಂಬುಗೆ ತುಳುವಿಗೆ ಬಂತು ಅಷ್ಟೆ.
ಪ್ರಾಚೀನ ಕಾಲದಲ್ಲಿ ಸತ್ತವರ ದೇಹವನ್ನು ಸುಡುವ ಕ್ರಮ ತುಳುವರಲ್ಲಿ ಇರಲಿಲ್ಲ. ಹೂಳು ವುದೇ ಪದ್ಧತಿ. ಪಾರ್ಥೀವ ಶರೀರವನ್ನು ಮಣ್ಣು ಮಾಡಿ ವಿರಳವಾಗಿ ಹನ್ನೊಂದನೆಯ ದಿನಕ್ಕೆ; ಹೆಚ್ಚಾಗಿ ಹದಿಮೂರನೆಯ ದಿನಕ್ಕೆ ‘ಬೊಜ್ಜ’ ನಡೆಯುತ್ತದೆ. ಇದು ವೈದಿಕರ ‘ಉತ್ತರಕ್ರಿಯೆ’, ‘ವೈಕುಂಠ ಸಮಾರಾಧನೆ’ ಇತ್ಯಾದಿ ಪರಿಕಲ್ಪನೆ ಗಿಂತ ಭಿನ್ನವಾದದ್ದು. ಉತ್ತರಕ್ರಿಯೆ ‘ತಿಲ ಹೋಮ’ ಸತ್ತವರಿಗೆ ಅಂತಿಮ ವಿದಾಯ ಹೇಳುತ್ತಾ ಪ್ರೇತವಾಗಿ ಕಾಡಬೇಡಿರೆಂಬ ಪ್ರಾರ್ಥನೆಯಲ್ಲಿ ಕೊನೆಯಾಗುತ್ತದೆ. ಆದರೆ ತುಳುವರ ಬೊಜ್ಜದಲ್ಲಿ ಸತ್ತವರನ್ನು ಮನೆಗೆ ಸೇರಿಸುವ ಸ್ವಾಗತದ ಆಶಯವಿದೆ. ಇದರ ತಾತ್ವಿಕ, ಮನೋವೈಜ್ಞಾನಿಕ ಮಹತ್ವ ತಿಳಿಯದೆ ಇದನ್ನು ಟೀಕಿಸಿ; ಈಗ ಅಸ್ಥಿ ವಿಸರ್ಜನೆಗೆ ಗೋಕರ್ಣ, ನಾಸಿಕ ಇತರೆಡೆ ಹೊರಡುವ ತುಳುವರನ್ನು ಕಂಡಾಗ ಮರುಕವಾಗುತ್ತಿದೆ.
‘ಕುಲೆ’ ಶಬ್ದವನ್ನು ಬೇಕೆಂದೇ ಕೀಳಾಗಿ ಪ್ರಚಾರ ನೀಡಿದ್ದು ತುಳುವರ ಸಾಂಸ್ಕೃತಿಕ ಪ್ರಪಂ ಚವನ್ನು ನಷ್ಟ ಮಾಡುವ ಹುನ್ನಾರ ಎನ್ನುವುದು ಸತ್ಯ. ಇಂದು ತುಳುನಾಡಿನಲ್ಲಿ ‘ಭೂತ’ ಬಿಡಿಸುವುದೇ ಕೆಲವರಿಗೆ ಉದ್ಯೋಗವಾಗಿದೆ. ಆದರೆ ‘ಭೂತ’ ಎನ್ನುವುದು ತಮ್ಮ ಹಿರಿಯರನ್ನು ತುಳು ವರು ಗೌರವಿಸುತ್ತಿರುವ, ಸ್ಮರಿಸುತ್ತಿರುವ ಒಂದು ನಂಬುಗೆ. ಅವರಿಗೆ ಗತಚೇತನಗಳು ‘ನಂಬಿದ ಸತ್ಯಗಳು’. ದೇಹ ಬಿಟ್ಟರೂ ತಮ್ಮವರು ತಮ್ಮಿಡ ನೆಯೇ ಇರುತ್ತಾರೆನ್ನುವ ಈ ಅದ್ಭುತ ಪರಿಕಲ್ಪನೆ ಯಾವ ಕಾಲಕ್ಕೂ ಬದುಕಿಗೆ ಶಕ್ತಿ ನೀಡುವ ಸಂಪತ್ತು ಎನ್ನುವುದನ್ನು ತುಳುವರು ಮರೆತಾಗ ಅವರ ಸಾಂಸ್ಕೃತಿಕ ಅಡಿಗಲ್ಲು ಅಲ್ಲಾಡುತ್ತದೆ.
ಸತ್ತವರೆಲ್ಲಾ ತುಳುವರಲ್ಲಿ ನಂಬಿದ ಸತ್ಯಗಳ ಪರಿವಾರಕ್ಕೆ ಸೇರುತ್ತಾರೆ. ಆದರೆ ಅವರಲ್ಲಿ ಯಾರು ಮನುಕುಲದ ಹಿತಕ್ಕಾಗಿ, ಮಾನವೀಯ ವೌಲ್ಯಕ್ಕಾಗಿ ಸಂಘರ್ಷ ನಡೆಸುತ್ತಾರೋ, ಅಂಥಾ ಧೀಮಂತ ಚೇತನರನ್ನು ‘ಶಕ್ತಿ’ಗಳೆಂದು ಗೌರವಿಸಲಾಗುತ್ತದೆ. ಆರಾಧಿಸಲಾಗುತ್ತದೆ. ಭೂತಗಳೆಂದರೆ ಕೈಲಾಸದಿಂದ ಶಿವ ಕಳುಹಿಸಿದ ‘ಶಾಂತಿಸೇನೆ’ ಯಾ ‘ಕಾವಲುಪಡೆ’ ಅಲ್ಲ. ಗೆದ್ದ ವರು ದೇವರಾಗುವುದು ವೈದಿಕ ಸಂಸ್ಕೃತಿಯ ವೈಶಿಷ್ಟ. ತುಳುವರ ಸಂಸ್ಕೃತಿಯಲ್ಲಿ ಮಾನ ವೀಯ ವೌಲ್ಯದ ರಕ್ಷಣೆಗಾಗಿ ಆತ್ಮಾರ್ಪಣೆ ಮಾಡಿದವರೂ ದೇವರಾಗುತ್ತಾರೆ.
ಇಲ್ಲಿ ಭೂತ ಸ್ಥಾನಕ್ಕೇರಿರುವ ಕೋಟಿ-ಚೆನ್ನಯ, ಸಿರಿ, ಬೊಬ್ಬರ್ಯ, ಕಲ್ಲುಟ್ಟ-ಕಲ್ಕುಡ, ಕೋರ್ದಬ್ಬು- ತನ್ನಿಮಾನಿಗ ಇವರೆಲ್ಲಾ ಆದರ್ಶಗಳ ಬೆನ್ನು ಹತ್ತಿ ಜನಮಾನಸದ ಕಣ್ಣು ತೆರೆಸಿದವರು. ಇದಲ್ಲದೆ ಪ್ರಾಣಿಗಳನ್ನೂ ಭೂತಗಳನ್ನಾಗಿಸಿ ಗೌರವಿಸಿದ ಹಿರಿಮೆ ತುಳು ಸಂಸ್ಕೃತಿಯಲ್ಲಿದೆ. ಭೂತಗಳ ಆದರ್ಶವನ್ನು ಸ್ಮರಿಸುವ ಪ್ರಚಾರ ನೀಡುವ ನಿಮಿತ್ತವಾಗಿ ನೇಮ ಕೋಲಗಳು ನಡೆಯು ತ್ತವೆ. ಈಗ ಕೆಲವೆಡೆ ಇದರ ಮೂಲೋದ್ದೇಶಗಳು ಮರೆಯಾಗಿ ಅನ್ಯ ಸಂಸ್ಕೃತಿಯ ಅಂಧಾನುಕರಣೆ ನಡೆದಿದ್ದರೆ ಅದಕ್ಕೆ ತುಳು ಸಂಸ್ಕೃತಿ ಹೊಣೆಯಲ್ಲ.
ಒಂದು ಸಂಸ್ಕೃತಿಯ ಉಳಿವಿಗೆ ಅದರ ಆಚಾರ-ವಿಚಾರಗಳು ಮಹತ್ವದ ಸ್ಥಾನವನ್ನು ಪಡೆಯುವಂತೆ; ಅವರ ಆಹಾರವೂ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ತುಳುವರಿಗೆಲ್ಲಾ ಜೀವರಸ ನೀಡುವ ಆಹಾರದಲ್ಲಿ ಕುಚ್ಚಲು ಅಕ್ಕಿ, ಮೀನು ವಿಶಿಷ್ಟವಾದದ್ದು. ಅಂತೆಯೇ ಹಬ್ಬ- ಸಡಗರದ ದಿನಗಳಂದು ಕೋಳಿ ಸಾರಿನ ಜೊತೆ ಅಕ್ಕಿಯ ರೊಟ್ಟಿ ಇಲ್ಲವೇ ‘ನೀರ್ದೋಸೆ’ ಜನ ಪ್ರಿಯವಾದದ್ದು. ಆದರೆ ಈಗೀಗ ಇದಕ್ಕೆಲ್ಲಾ ಎರಡನೆಯ ದರ್ಜೆಯನ್ನು ತುಳುವರು ನೀಡುತ್ತಿ ರುವುದು ಒಂದು ಅಪಾಯಕಾರಿ ಬೆಳವಣಿಗೆ. ಈ ‘ಮಡಿವಂತಿಕೆ’ ತುಳುವರಲ್ಲಿ ಕೀಳರಿಮೆಯನ್ನು ತುಂಬುತ್ತಿದೆ. ಇದು ಆದಷ್ಟು ಬೇಗ ನಿಲ್ಲಬೇಕು.
ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಹಿಂದೊಮ್ಮೆ ಜಾಗತಿಕವಾಗಿಯೂ ಪುರಸ್ಕಾರ ಪಡೆದಿದ್ದ ಸಾಮಾಜಿಕ ವ್ಯವಸ್ಥೆಯಾಗಿತ್ತು. ಅದೇ ತುಳುವರ ಕೌಟುಂಬಿಕ ವ್ಯವಸ್ಥೆಯಾಗಿತ್ತು. ಇಲ್ಲಿ ಹೆಣ್ಣಿಗೆ ಮಾತ್ರ ಆಸ್ತಿಯ ಒಡೆತನವಿತ್ತು. ದುಡಿಯುತ್ತ ಬದುಕನ್ನು ಬಂಗಾರವಾಗಿಸುವುದು ಗಂಡುಹೆಣ್ಣಿಗೆ ಇದರಿಂದ ಅನಿವಾರ್ಯವಾಗಿತ್ತು. ಪುರುಷನ ದಬ್ಬಾಳಿಕೆ ಸ್ತ್ರೀಯರ ಮೇಲೆ ಅಸಾಧ್ಯವಾಗಿತ್ತು. ವಿಧವೆಯರಿಗೆ ಅಂಗವಿಕಲರಿಗೆ ಆಶ್ರಯವಿರುತ್ತಿತ್ತು.
ಈ ಮಾತೃಪ್ರಧಾನ ಪದ್ಧತಿಯಿರುವ ಕೌಟುಂಬಿಕ ವ್ಯವಸ್ಥೆಯನ್ನು ನಾಶಪಡಿಸದೆ ವೈದಿಕ ಸಂಸ್ಕೃತಿಯನ್ನು ಪ್ರಚಾರ ಮಾಡುವುದು ಅಸಾಧ್ಯವಾಗಿತ್ತು. ಅದಕ್ಕಾಗಿ ವೈದಿಕ ಸಂಸ್ಕೃತಿ ಜಾಣ್ಮೆಯಿಂದಲೇ ತುಳುವರ ಕೌಟುಂಬಿಕ ಕಲಹವನ್ನು ‘ಅಳಿಯ ಸಂತಾನ ಕಟ್ಟು’ಎಂಬ ನಾಟಕ ಹುಟ್ಟು ಹಾಕಿತ್ತು. ಇದರಿಂದ ತಾಯಿಯಿಂದ ಮಗಳಿಗೆ ಬರುತ್ತಿದ್ದ ಆಸ್ತಿಯ ಹಕ್ಕು ಮಾವನಿಂದ ಅಳಿಯನಿಗೆ ಎಂದಾಗ ತುಳುನಾಡಿನ ತಾಯಂದಿರು ಕಂಗೆಟ್ಟರು. ಅತಂತ್ರರಾದರು. ಆದರೆ ಹೊಸ ವ್ಯವಸ್ಥೆಯನ್ನು ಪ್ರತಿಭಟಿಸಿದರೆ ಕೌಟುಂಬಿಕ ಕಲಹ ಅನಿವಾರ್ಯವಾಗುತ್ತಿತ್ತು.
ಅದು ನಮ್ಮ ತಾಯಂದಿರಿಗೆ ಬೇಡವಾಗಿತ್ತು. ಪ್ರಾಯಶಃ ಜಗತ್ತಿನ ಇತಿಹಾಸದಲ್ಲಿ ಆಸ್ತಿಯನ್ನು ಒಬ್ಬರಿಂದ ಇನ್ನೊಬ್ಬರು ಈ ರೀತಿಯ ನಯವಂಚನೆಯಿಂದ ಪಡೆದ ದಾಖಲೆಯಿರಲಾರದು. ಇದಕ್ಕೆ ಭೂತಾಳಪಾಂಡೆಯ ಕಟ್ಟುಕತೆಯೊಂದು ಸಮರ್ಥನೆಯ ರೂಪದಲ್ಲಿ ಪ್ರಚಾರ ಪಡೆಯಿತು. ಅಂದೇ ತುಳು ಸಂಸ್ಕೃತಿಯ ನಾಶಕ್ಕೆ ಬೀಜಾಂಕುರವಾಗಿತ್ತು.
ಸ್ವತಂತ್ರ ಭಾರತದಲ್ಲಿಯ ಸಂವಿಧಾನ ಈಗ ಗಂಡು ಹೆಣ್ಣಿನ ಸಮಾನತೆಯನ್ನು ಎತ್ತಿ ಹಿಡಿದು ಆಸ್ತಿಯಲ್ಲಿ ಸಮಪಾಲಿನ ಕಾಯಿದೆ ಮಾಡಿದ್ದು ಪುರುಷ ಪ್ರಧಾನ ವ್ಯವಸ್ಥೆಯ ಅಬ್ಬರವನ್ನು ಸ್ವಲ್ಪಮಟ್ಟಿಗೆ ತಣಿಸಿದೆ. ಹಾಗಿದ್ದೂ ಪುನರಪಿ ಮನುವಿನ ಸಂವಿಧಾನವನ್ನು ಊರ್ಜಿತಗೊಳಿಸುವ ಪ್ರಯತ್ನ ಈಗ ಬಹಿರಂಗವಾಗಿ ಸೀಮಿತ ಗುಂಪೊಂದು ನಡೆಸುತ್ತಿರುವುದನ್ನು ನಾವೆಲ್ಲಾ ಸಂಘಟಿತರಾಗಿ ತಡೆಯದಿದ್ದರೆ ಮಾನವ ಹಕ್ಕಿಗೆ ಧಕ್ಕೆಯಾಗಬಹುದು.
ತುಳು ಸಂಸ್ಕೃತಿಯ ವಿಶಿಷ್ಟತೆಗಳನ್ನು ವಿವೇಚಿಸಿದ ನಂತರ ತುಳುವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ದೊರೆಯುತ್ತದೆ. ನಿಸರ್ಗದ ಆರಾಧಕರು, ಮೂರ್ತಿ ಪೂಜೆ, ಪುನರ್ಜನ್ಮ, ಸ್ವರ್ಗ-ನರಕ ಇತ್ಯಾದಿಗಳಲ್ಲಿ ನಂಬಿಕೆಯಿರದವರು ತುಳು ಸಂಸ್ಕೃತಿಯ ವಾರಸುದಾರರು, ಇವರಿಗೆ ಪರಿಸರವೇ ಸ್ವರ್ಗ. ಹಿಂದೆ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಒಪ್ಪಿದವರು ತುಳುವರು. ಈಗ ಅನೇಕ ತುಳುವರ ಭಾಷೆ ತುಳುವಾಗಿರದಿದ್ದರೂ ಅವರ ಆಚಾರ ವಿಚಾರದಲ್ಲಿ ತುಳು ಸಂಸ್ಕೃತಿಯ ಸಿರಿತನವಿದೆ. ಇಂತವರೆಲ್ಲಾ ತುಳುವರು.
ತುಳುವರು ಅಂಧಾನುಕರಣೆಯ ವ್ಯಾಮೋಹದಿಂದ ದೂರನಿಂತು, ಇಂದು ವಿಶ್ವದಾದ್ಯಂತ ಪಸರಿಸಿರುವ ತನ್ನವರನ್ನೆಲ್ಲಾ ಸಾಂಸ್ಕೃತಿಕವಾಗಿ ಗುರುತಿಸುವ ಕೆಲಸಕ್ಕೆ ಕಟಿಬದ್ಧರಾಗಬೇಕಾಗಿದೆ. ಅದರ ಜೊತೆಗೆ ಅನ್ಯ ಸಂಸ್ಕೃತಿಯ ತುಳು ಯಾ ಇತರ ಭಾಷಿಕರೊಡನೆ ಸಾಮರಸ್ಯವನ್ನು ಸಾಧಿಸಬೇಕಾಗಿದೆ. ತುಳು ಸಾಹಿತ್ಯ ಕಲೆಗಳಲ್ಲಿ ಮೂಲ ತುಳು ಸಂಸ್ಕೃತಿಯ ಸೊಬಗು ಮಾಯವಾಗಿ ಕೇವಲ ತುಳು ಭಾಷೆಯು ಮಾತ್ರ ಉಳಿದರೆ ಇದು ಅವರ ಸಾಂಸ್ಕೃತಿಕ ದುರಂತವಾದೀತು.
ರವಿ. ರಾ. ಆಂಚನ್
ಗುರುವಾರ - ಅಕ್ಟೋಬರ್ -28-2010
ತುಳು ಭಾಷೆಯ ಅಭಿಮಾನ ಬೆಳೆಯುತ್ತಿದೆ. ತುಳು ಸಮ್ಮೇಳನಗಳು ಅಖಿಲ ಭಾರತ ಸಮ್ಮೇಳನಗಳೆಂದು ಕರೆಸಿಕೊಂಡಿವೆ. ತುಳುವಿನಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೃಜನಾತ್ಮಕ ಅಂತೆಯೇ ಸೃಜನೇತರ ಬೆಳೆ ತೆಗೆಯುವ ಕೃಷಿ ನಡೆದಿದೆ. ಕನ್ನಡ ಲಿಪಿಯನ್ನು ಬಳಸಿ ತುಳು ಭಾಷೆಯಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಪ್ರಶಸ್ತಿ ದೊರೆಯುವ ಸಂಪ್ರದಾಯ ಆರಂಭವಾಗಿದೆ. ತುಳುವಿಗೆ ಲಿಪಿ ಇದೆಯೇ? ಹೀಗೆ ಹುಬ್ಬೇರಿಸಿ ಕೇಳುವವರು ಅಬ್ಬರ ತಣ್ಣಗಾಗುತ್ತಿದೆ.
ಹಾಗೆ ನೋಡಿದರೆ ಇಂಗ್ಲಿಷ್ ಭಾಷೆಗೆ ಲಿಪಿಯಿಲ್ಲವಲ್ಲ! ಅದು ರೋಮನ್ ಲಿಪಿಯಿಂದ ಜನ ಮನ್ನಣೆ ಪಡೆಯಲಿಲ್ಲವೇ? ಹಿಂದಿ, ಮರಾಠಿ, ಗುಜರಾತಿ ಭಾಷೆಗಳಿಗೆ, ಸ್ವತಂತ್ರ ಲಿಪಿಯಿಲ್ಲ ವಲ್ಲ! ಈ ಎಲ್ಲಾ ಪ್ರಶ್ನೆ ವಿಸ್ಮಯಗಳು ತುಳು ವಿರೋಧಿಗಳ ಬಾಯಿ ಮುಚ್ಚಿಸಿವೆ. ಹೀಗೆಂದ ಮಾತ್ರಕ್ಕೆ ತುಳುವಿಗೆ ಲಿಪಿ ಇರಲೇ ಇಲ್ಲವೆಂದಲ್ಲ. ಹಳೆ ಮಲೆಯಾಳಿ ಲಿಪಿಗೆ ಸರಿ ಹೊಂದುವ ತುಳು ಲಿಪಿಯೊಂದು ಹಿಂದೆ ಇದ್ದುದನ್ನು ವಿದ್ವಾಂಸರು ಒಪ್ಪುತ್ತಾರೆ. ಆದರೆ ಆ ಲಿಪಿಯಲ್ಲಿ ಬರೆದ ತುಳು ಸಾಹಿತ್ಯ ಕೃತಿಗಳಾಗಲಿ, ಶಾಸನಗಳಾಗಲಿ ಈವರೆಗೆ ದೊರೆತಿಲ್ಲ.
ಒಂದು ಜನಾಂಗವನ್ನು ನಿರ್ವೀರ್ಯಗೊಳಿಸಬೇಕಾದರೆ ಮೊದಲು ಅವರ ಭಾಷೆಯನ್ನು ಕೊಲ್ಲಬೇಕು. ಆ ಬಳಿಕ ಅವರ ಸಂಸ್ಕೃತಿಯ ಮೇಲೆ ಹಲ್ಲೆ ನಡೆಸಬೇಕು. ಇದೆಲ್ಲಾ ಇಂದು ತುಳುವರೆಂದು ಕರೆಸಿಕೊಳ್ಳುವ ವಲಸಿಗ ರಿಂದ ಕ್ರಿ.ಶ. 4ನೆಯ ಶತಮಾನದಿಂದ ನಡೆಯು ತ್ತಲೇ ಬಂದಿದೆ. ತುಳು ಲಿಪಿಯನ್ನು ನಾಶಗೊಳಿಸಿ ದವರು ಯಾರೆಂಬ ಚಾರಿತ್ರಿಕ ಸಂಗತಿ ಇನ್ನಷ್ಟೇ ಸಂಶೋಧನೆಯಿಂದ ಬೆಳಕು ಕಾಣಬೇಕಾಗಿದೆ. ತುಳು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಇದೆಲ್ಲಾ ಅಗತ್ಯವಾಗಿ ನಡೆಯಬೇಕಾದದ್ದೆ.
ಆದರೆ ಕೇವಲ ಭಾಷೆಯೊಂದನ್ನು ಮಾತ್ರ ಬೆಳೆಸಿ ತುಳು ಸಂಸ್ಕೃತಿಯನ್ನು ನಿರ್ಲಕ್ಷಿಸುವುದು ಸರಿಯೇ? ಹಿಂದೊಮ್ಮೆ ಒಂದು ಉನ್ನತ ಆದ ರ್ಶದ ಬದುಕಿಗೆ ಚಾಲನೆ ನೀಡಿದ ಮಾತ್ರವಲ್ಲದೆ ಇಂದಿಗೂ ಮಾನವರ ಬದುಕಿಗೆ ನೆರವಾಗಬಲ್ಲ; ಪ್ರಗತಿ ಪರವೂ, ಜನ ಪರವೂ ಆಗಿರಬಲ್ಲ ತುಳು ಸಂಸ್ಕೃತಿ ಈಗ ತುಳುವರಿಂದಲೇ ಅಪಾ ಯದ ಅಂಚಿನಲ್ಲಿದೆ. ಇಂದಿನ ಸಂಕ್ರಮಣ ಕಾಲದಲ್ಲಿ ತುಳು ಸಂಸ್ಕೃತಿಯ ಕುರಿತು ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ.
ತುಳು ಮಾತೃಭಾಷೆಯವರು ತುಳು ಭಾಷೆಯ ಉಳಿವಿಗಾಗಿ ಪ್ರಯತ್ನಿಸುತ್ತಾರೆ. ಅಂತೆಯೇ ತುಳು ಸಂಸ್ಕೃತಿಯ ಉಳಿವಿಗಾಗಿ ತುಳುವರೆಲ್ಲಾ ಪ್ರಯತ್ನಿಸಬೇಕು. ಹಾಗಿದ್ದರೆ ತುಳುವರೆಂದರೆ ಯಾರು? ಇಂದು ಕುಂದಾಪುರ ತಾಲೂಕಿನಲ್ಲಿ ಕನ್ನಡ ಮಾತನಾಡುವವರು, ಕಾಸರಗೋಡು ತಾಲೂಕಿನಲ್ಲಿ ಮಲೆಯಾಳಿ ಮಾತನಾಡುವವರು ತುಳುವರಲ್ಲವೇ? ಅನ್ಯಾನ್ಯ ಕಾರಣಗಳಿಂದ ತುಳುನಾಡನ್ನು ಬಿಟ್ಟು ದೇಶ, ವಿದೇಶಗಳಿಗೆ ವಲಸೆ ಹೋಗಿ ಈಗ ತುಳು ಮರೆ ತವರನ್ನು ತುಳುವರೆಂದು ಕರೆಯುವುದು ಸರಿಯೇ? ಇಂತಹ ಹಲವಾರು ಪ್ರಶ್ನೆಗಳಿಗೆ ಸಮಾಧಾನದ ಉತ್ತರವಿತ್ತು ತುಳುವರನ್ನು ಬೆಸೆಯುವ ಕಸುವು ಇಂದಿಗೂ ತುಳು ಸಂಸ್ಕೃತಿಯಲ್ಲಿದೆ.
ತುಳುವರು ತುಳು ಸಂಸ್ಕೃತಿಯ ವೈಶಿಷ್ಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳ ಬೇಕಾದರೆ; ಅವರು ತುಳು ಸಂಸ್ಕೃತಿ ಕೇವಲ ಪ್ರದೇಶ, ಭಾಷೆ, ಮತವಾಚಕ ಸಂಸ್ಕೃತಿಗಳೆಂಬ ಭ್ರಮೆಯಿಂದ ಹೊರ ಬರಬೇಕು. ತುಳು ಸಂಸ್ಕೃತಿ ‘ಜನಾಂಗವಾಚಕ’ ಸಂಸ್ಕೃತಿಯೆಂದು ತಿಳಿಯ ಬೇಕು. ಆಗ ಕನ್ನಡಿಗರಿಗೆ ತುಳುನಾಡಿನ ಬೇಡಿಕೆ ಸಾಂಸ್ಕೃತಿಕ ಬೇಡಿಕೆಯಾಗಿ ಮಾತ್ರ ಕಾಣುತ್ತದೆ. ಅದು ರಾಜಕೀಯದ ಪ್ರತ್ಯೇಕತಾವಾದಿ ಚದುರಂಗದಾಟವೆಂಬ ಗುಮಾನಿ ತಪ್ಪುತ್ತದೆ.
ಅಂತೆಯೇ ರಾಜಸ್ಥಾನದ ‘ಬಿಲ್’, ಮಧ್ಯ ಪ್ರದೇಶದ ‘ಶಾಂತಲಿ’ ಜನಾಂಗಗಳ ಸಾಂಸ್ಕೃತಿಕ ಅಧ್ಯಯನದ ಜೊತೆಗೆ ಅಮೆರಿಕ, ಆಫ್ರಿಕ, ಆಸ್ಟ್ರೇಲಿಯ ದೇಶಗಳಲ್ಲೂ ಮಾತೃ ಪ್ರಧಾನ ವ್ಯವಸ್ಥೆಯ ಸಂಸ್ಕೃತಿಗಳನ್ನು ತುಳು ಸಂಸ್ಕೃತಿ ಯೊಂದಿಗೆ ತೌಲನಿಕವಾಗಿ ಅಭ್ಯಾಸ ಮಾಡಿ ದಾಗ; ತುಳುವಿನ ಸಾಂಸ್ಕೃತಿಕ ಬೇರುಗಳ ಹರವು ಆಳ ಮತ್ತು ತುಳು ಸಾಂಸ್ಕೃತಿಕ ವೃಕ್ಷದ ಎತ್ತರಗಳನ್ನು ಕಂಡು ಹಿಡಿಯಲು ಸಾಧ್ಯವಾದೀತು.
ಈವರೆಗೆ ನಮ್ಮ ಸಾಂಸ್ಕೃತಿಕ ಹುಡುಕಾಟ ವಿಂದ್ಯಾದ್ರಿಯ ದಕ್ಷಿಣ ಪ್ರದೇಶಕ್ಕೆ ಹೆಚ್ಚಾಗಿ ಸೀಮಿತಗೊಂಡದ್ದನ್ನು ಇಲ್ಲಿ ಗಮನಿಸಬೇಕಾಗಿದೆ. ಇವೆಲ್ಲಕ್ಕೂ ಮೂಲದಲ್ಲಿ ತುಳು ಸಂಸ್ಕೃತಿ ಆರ್ಯ, ದ್ರಾವಿಡ, ವೈದಿಕ ಇತ್ಯಾದಿ ವರ್ತುಲಗಳಿಂದ ಹೊರಬಂದು ಅದು ಅವೆಲ್ಲಕ್ಕೂ ಪೂರ್ವದಲ್ಲಿದ್ದ ಮೂಲ ಭಾರತೀಯ ಸಂಸ್ಕೃತಿಯ ಒಂದಂಗ ವೆನ್ನುವುದರ ಎಚ್ಚರ ಅಗತ್ಯ. ತುಳು ಸಂಸ್ಕೃತಿಯ ವೈಶಿಷ್ಟಗಳನ್ನು ಅರಿಯದೆ ತುಳುವರ ಸರ್ವಾಂಗೀಣ ಪ್ರಗತಿ ಸಾಧ್ಯವಿಲ್ಲ.
ತುಳುವರು ನಿಸರ್ಗದ ಆರಾಧಕರು. ಬದುಕಿನ ನೆರವಾಗಬಲ್ಲ ಎಲ್ಲವನ್ನೂ ಶ್ರದ್ಧೆಯಿಂದ ಕಾಣು ವುದು, ತುಳು ಸಂಸ್ಕೃತಿಯ ವೈಶಿಷ್ಟಗಳಲ್ಲಿ ಒಂದಾಗಿದೆ. ತುಳುವರು ನಾಸ್ತಿಕರಲ್ಲ. ಅಂತೆಯೇ ಅವರು ಮೂರ್ತಿ ಪೂಜಕರಂತೂ ಅಲ್ಲವೇ ಅಲ್ಲ. ಇಂದಿಗೂ ತುಳುನಾಡಿನ ಮೂಲ ಸಂಸ್ಕೃತಿಯ ಕೆಲವು ಅಂಶಗಳನ್ನು ‘ಕೊರಗ’ ಜನಾಂಗದಲ್ಲಿ ಕಾಣಬಹುದು.
ಮರದ ಪೂಜೆ ಇಂದಿಗೂ ‘ಕೊರಗ’ ಜನಾಂಗದಲ್ಲಿ ಪ್ರಚಲಿತವಾಗಿದೆ. ತುಳುವರ ನಾಗಬನಗಳು ಇದಕ್ಕೆ ಪುರಾವೆಯಾಗಿವೆ. ನಾಗಬನ ನಾಗಸ್ಥಾನವಾಗಿ ಇಂದು ಬಿಂಬ ಪ್ರತಿಷ್ಠೆಯ ಮಟ್ಟಕ್ಕೆ ತಿರುಗಿದ್ದು ನಂತರದ ಬೌದ್ಧ ಮತ್ತು ವೈದಿಕ ಸಂಸ್ಕೃತಿಯ ಪ್ರಭಾವದಿಂದ ಮಾತ್ರ. ಈಗ ‘ಮರ, ಮಾರಮ್ಮನಾಗಿ, ಮಾರಿ ಕಾಂಬೆಯಾಗಿ, ಮಾಲಿಂಗೇಶ್ವರಿಯಾಗಿ ಕೊನೆಯಲ್ಲಿ ಮಹಿಷಾಸುರ ಮರ್ದಿನಿಯಾಗಿ ಬೆಳೆಯಿತು’ ಎಂಬ ಡಾ. ಅರವಿಂದ ಮಾಲಗತ್ತಿಯವರ ಅಭಿಪ್ರಾಯ ಇಲ್ಲಿ ಗಮನಾರ್ಹ.
ರವಿ. ರಾ. ಅಂಚನ್
ಅಪಾಯದ ಅಂಚಿನಲ್ಲಿ ತುಳು ಸಂಸ್ಕೃತಿ (ಭಾಗ-2)
ಶುಕ್ರವಾರ - ಅಕ್ಟೋಬರ್ -29-2010
ಹಿಂದೊಮ್ಮೆ ಕಾಯಕವನ್ನೇ ಪೂಜೆಯೆಂದು ಬಗೆಯುವ ವರ್ಣಾಶ್ರಮದ ತಾರತಮ್ಯವಿಲ್ಲದ ಸಂಸ್ಕೃತಿಯೇ ತುಳು ಸಂಸ್ಕೃತಿ, ‘ತುಳುನಾಡಿನಲ್ಲಿ ಶೂದ್ರರಿರಲೇ ಇಲ್ಲ. ನನ್ನ ಮನೆಯ ಪೂಜೆಗೆ, ಮದುವೆಗೆ ಯಾ ಇತರ ಧಾರ್ಮಿಕ ಕೆಲಸಗಳಿಗೆ ಬ್ರಾಹ್ಮಣರನ್ನು ಕರೆಯುವ ಕ್ರಮವೇ ಇರಲಿಲ್ಲ’ ಎಂದು ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಬೆಂಗಳೂರಿನ ತುಳುಕೂಟದ ವಿಚಾರ ಗೋಷ್ಠಿ ಯಲ್ಲಿ ಹೇಳಿರುವುದು ನೂರಕ್ಕೆ ನೂರು ಪಾಲು ಸತ್ಯ. ಕುಲ ಮೂಲದ ‘ಬಳಿ’ಯ ಮುಖೇನ ಕುಟುಂಬದ ನೆಲೆಯನ್ನು ಗುರುತಿಸುವ ತುಳುವ ರಲ್ಲಿ ವೃತ್ತಿ ಸ್ವಾತಂತ್ರವಿತ್ತು. ಹುಟ್ಟನ್ನು ಆಧರಿಸಿ ಕುಲ ಕಸುಬು ಬೆಳೆದಿರಲಿಲ್ಲ; ವಿವಾಹದಲ್ಲಿ ‘ಬಳಿ’ ಅಂದರೆ ‘ಬರಿ’ಯ ಪರಿಗಣನೆ ನಡೆಯುತ್ತಿತ್ತು.
ದೀಪಾವಳಿ ಹಬ್ಬ ತುಳುವರಿಗೆ ಒಂದು ವಿಶಿಷ್ಟ ಬಗೆಯ ಪ್ರಕೃತಿ ಪೂಜೆಯ ಹಬ್ಬವಾಗಿದೆ. ದೀಪಾವಳಿಯ ಪ್ರಥಮ ದಿನದ ಹಬ್ಬಕ್ಕೆ ‘ಸತ್ತವರ ಹಬ್ಬ’ ಎಂದು ಕರೆಯುತ್ತಾರೆ. ಹೀಗೆಂದಾಕ್ಷಣ ಗಾಬರಿಯಾಗುವುದು ಸಹಜ. ಯಾಕೆಂದರೆ ಸತ್ತವರೊಡನೆ ‘ಭೂತ’ ಶಬ್ದವನ್ನು ಅನಿಷ್ಟ ಮತ್ತು ಕೆಟ್ಟದರ ಜೊತೆಯಲ್ಲಿ ಸಮೀಕರಿಸಲಾಗಿದೆ. ಇದು ಸಂಸ್ಕೃತಿಯ ತಪ್ಪಲ್ಲ. ಅಪಪ್ರಚಾರ ಅನಾ ಚಾರವನ್ನೇ ಸತ್ಯವೆಂದು ನಂಬುವ ತುಳುವ ಅಜ್ಞಾನ ಮಾತ್ರ. ‘ಸತ್ತವರೆಲ್ಲಾ ಕುಲೆಗಳಾಗು ತ್ತಾರೆ ವೌಲ್ಯಕ್ಕೆ ಹೋರಾಡಿದವರು ಮಾತ್ರ ಭೂತಗಳಾಗುತ್ತಾರೆ’ ಎಂಬ ಡಾ. ಕೆ.ಚಿನ್ನಪ್ಪ ಗೌಡರ ಮಾತು ಇಲ್ಲಿ ನೆನಪಾಗುತ್ತದೆ. ಒಟ್ಟಿನಲ್ಲಿ ತುಳುವರಿಗೆ ಪುನರ್ಜನ್ಮದಲ್ಲಿ ನಂಬಿಕೆಯಿಲ್ಲ. ಕೆಲವು ತುಳುವರು ಜೈನರಾದಾಗ ಪುನರ್ಜನ್ಮದ ನಂಬುಗೆ ತುಳುವಿಗೆ ಬಂತು ಅಷ್ಟೆ.
ಪ್ರಾಚೀನ ಕಾಲದಲ್ಲಿ ಸತ್ತವರ ದೇಹವನ್ನು ಸುಡುವ ಕ್ರಮ ತುಳುವರಲ್ಲಿ ಇರಲಿಲ್ಲ. ಹೂಳು ವುದೇ ಪದ್ಧತಿ. ಪಾರ್ಥೀವ ಶರೀರವನ್ನು ಮಣ್ಣು ಮಾಡಿ ವಿರಳವಾಗಿ ಹನ್ನೊಂದನೆಯ ದಿನಕ್ಕೆ; ಹೆಚ್ಚಾಗಿ ಹದಿಮೂರನೆಯ ದಿನಕ್ಕೆ ‘ಬೊಜ್ಜ’ ನಡೆಯುತ್ತದೆ. ಇದು ವೈದಿಕರ ‘ಉತ್ತರಕ್ರಿಯೆ’, ‘ವೈಕುಂಠ ಸಮಾರಾಧನೆ’ ಇತ್ಯಾದಿ ಪರಿಕಲ್ಪನೆ ಗಿಂತ ಭಿನ್ನವಾದದ್ದು. ಉತ್ತರಕ್ರಿಯೆ ‘ತಿಲ ಹೋಮ’ ಸತ್ತವರಿಗೆ ಅಂತಿಮ ವಿದಾಯ ಹೇಳುತ್ತಾ ಪ್ರೇತವಾಗಿ ಕಾಡಬೇಡಿರೆಂಬ ಪ್ರಾರ್ಥನೆಯಲ್ಲಿ ಕೊನೆಯಾಗುತ್ತದೆ. ಆದರೆ ತುಳುವರ ಬೊಜ್ಜದಲ್ಲಿ ಸತ್ತವರನ್ನು ಮನೆಗೆ ಸೇರಿಸುವ ಸ್ವಾಗತದ ಆಶಯವಿದೆ. ಇದರ ತಾತ್ವಿಕ, ಮನೋವೈಜ್ಞಾನಿಕ ಮಹತ್ವ ತಿಳಿಯದೆ ಇದನ್ನು ಟೀಕಿಸಿ; ಈಗ ಅಸ್ಥಿ ವಿಸರ್ಜನೆಗೆ ಗೋಕರ್ಣ, ನಾಸಿಕ ಇತರೆಡೆ ಹೊರಡುವ ತುಳುವರನ್ನು ಕಂಡಾಗ ಮರುಕವಾಗುತ್ತಿದೆ.
‘ಕುಲೆ’ ಶಬ್ದವನ್ನು ಬೇಕೆಂದೇ ಕೀಳಾಗಿ ಪ್ರಚಾರ ನೀಡಿದ್ದು ತುಳುವರ ಸಾಂಸ್ಕೃತಿಕ ಪ್ರಪಂ ಚವನ್ನು ನಷ್ಟ ಮಾಡುವ ಹುನ್ನಾರ ಎನ್ನುವುದು ಸತ್ಯ. ಇಂದು ತುಳುನಾಡಿನಲ್ಲಿ ‘ಭೂತ’ ಬಿಡಿಸುವುದೇ ಕೆಲವರಿಗೆ ಉದ್ಯೋಗವಾಗಿದೆ. ಆದರೆ ‘ಭೂತ’ ಎನ್ನುವುದು ತಮ್ಮ ಹಿರಿಯರನ್ನು ತುಳು ವರು ಗೌರವಿಸುತ್ತಿರುವ, ಸ್ಮರಿಸುತ್ತಿರುವ ಒಂದು ನಂಬುಗೆ. ಅವರಿಗೆ ಗತಚೇತನಗಳು ‘ನಂಬಿದ ಸತ್ಯಗಳು’. ದೇಹ ಬಿಟ್ಟರೂ ತಮ್ಮವರು ತಮ್ಮಿಡ ನೆಯೇ ಇರುತ್ತಾರೆನ್ನುವ ಈ ಅದ್ಭುತ ಪರಿಕಲ್ಪನೆ ಯಾವ ಕಾಲಕ್ಕೂ ಬದುಕಿಗೆ ಶಕ್ತಿ ನೀಡುವ ಸಂಪತ್ತು ಎನ್ನುವುದನ್ನು ತುಳುವರು ಮರೆತಾಗ ಅವರ ಸಾಂಸ್ಕೃತಿಕ ಅಡಿಗಲ್ಲು ಅಲ್ಲಾಡುತ್ತದೆ.
ಸತ್ತವರೆಲ್ಲಾ ತುಳುವರಲ್ಲಿ ನಂಬಿದ ಸತ್ಯಗಳ ಪರಿವಾರಕ್ಕೆ ಸೇರುತ್ತಾರೆ. ಆದರೆ ಅವರಲ್ಲಿ ಯಾರು ಮನುಕುಲದ ಹಿತಕ್ಕಾಗಿ, ಮಾನವೀಯ ವೌಲ್ಯಕ್ಕಾಗಿ ಸಂಘರ್ಷ ನಡೆಸುತ್ತಾರೋ, ಅಂಥಾ ಧೀಮಂತ ಚೇತನರನ್ನು ‘ಶಕ್ತಿ’ಗಳೆಂದು ಗೌರವಿಸಲಾಗುತ್ತದೆ. ಆರಾಧಿಸಲಾಗುತ್ತದೆ. ಭೂತಗಳೆಂದರೆ ಕೈಲಾಸದಿಂದ ಶಿವ ಕಳುಹಿಸಿದ ‘ಶಾಂತಿಸೇನೆ’ ಯಾ ‘ಕಾವಲುಪಡೆ’ ಅಲ್ಲ. ಗೆದ್ದ ವರು ದೇವರಾಗುವುದು ವೈದಿಕ ಸಂಸ್ಕೃತಿಯ ವೈಶಿಷ್ಟ. ತುಳುವರ ಸಂಸ್ಕೃತಿಯಲ್ಲಿ ಮಾನ ವೀಯ ವೌಲ್ಯದ ರಕ್ಷಣೆಗಾಗಿ ಆತ್ಮಾರ್ಪಣೆ ಮಾಡಿದವರೂ ದೇವರಾಗುತ್ತಾರೆ.
ಇಲ್ಲಿ ಭೂತ ಸ್ಥಾನಕ್ಕೇರಿರುವ ಕೋಟಿ-ಚೆನ್ನಯ, ಸಿರಿ, ಬೊಬ್ಬರ್ಯ, ಕಲ್ಲುಟ್ಟ-ಕಲ್ಕುಡ, ಕೋರ್ದಬ್ಬು- ತನ್ನಿಮಾನಿಗ ಇವರೆಲ್ಲಾ ಆದರ್ಶಗಳ ಬೆನ್ನು ಹತ್ತಿ ಜನಮಾನಸದ ಕಣ್ಣು ತೆರೆಸಿದವರು. ಇದಲ್ಲದೆ ಪ್ರಾಣಿಗಳನ್ನೂ ಭೂತಗಳನ್ನಾಗಿಸಿ ಗೌರವಿಸಿದ ಹಿರಿಮೆ ತುಳು ಸಂಸ್ಕೃತಿಯಲ್ಲಿದೆ. ಭೂತಗಳ ಆದರ್ಶವನ್ನು ಸ್ಮರಿಸುವ ಪ್ರಚಾರ ನೀಡುವ ನಿಮಿತ್ತವಾಗಿ ನೇಮ ಕೋಲಗಳು ನಡೆಯು ತ್ತವೆ. ಈಗ ಕೆಲವೆಡೆ ಇದರ ಮೂಲೋದ್ದೇಶಗಳು ಮರೆಯಾಗಿ ಅನ್ಯ ಸಂಸ್ಕೃತಿಯ ಅಂಧಾನುಕರಣೆ ನಡೆದಿದ್ದರೆ ಅದಕ್ಕೆ ತುಳು ಸಂಸ್ಕೃತಿ ಹೊಣೆಯಲ್ಲ.
ಒಂದು ಸಂಸ್ಕೃತಿಯ ಉಳಿವಿಗೆ ಅದರ ಆಚಾರ-ವಿಚಾರಗಳು ಮಹತ್ವದ ಸ್ಥಾನವನ್ನು ಪಡೆಯುವಂತೆ; ಅವರ ಆಹಾರವೂ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ತುಳುವರಿಗೆಲ್ಲಾ ಜೀವರಸ ನೀಡುವ ಆಹಾರದಲ್ಲಿ ಕುಚ್ಚಲು ಅಕ್ಕಿ, ಮೀನು ವಿಶಿಷ್ಟವಾದದ್ದು. ಅಂತೆಯೇ ಹಬ್ಬ- ಸಡಗರದ ದಿನಗಳಂದು ಕೋಳಿ ಸಾರಿನ ಜೊತೆ ಅಕ್ಕಿಯ ರೊಟ್ಟಿ ಇಲ್ಲವೇ ‘ನೀರ್ದೋಸೆ’ ಜನ ಪ್ರಿಯವಾದದ್ದು. ಆದರೆ ಈಗೀಗ ಇದಕ್ಕೆಲ್ಲಾ ಎರಡನೆಯ ದರ್ಜೆಯನ್ನು ತುಳುವರು ನೀಡುತ್ತಿ ರುವುದು ಒಂದು ಅಪಾಯಕಾರಿ ಬೆಳವಣಿಗೆ. ಈ ‘ಮಡಿವಂತಿಕೆ’ ತುಳುವರಲ್ಲಿ ಕೀಳರಿಮೆಯನ್ನು ತುಂಬುತ್ತಿದೆ. ಇದು ಆದಷ್ಟು ಬೇಗ ನಿಲ್ಲಬೇಕು.
ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಹಿಂದೊಮ್ಮೆ ಜಾಗತಿಕವಾಗಿಯೂ ಪುರಸ್ಕಾರ ಪಡೆದಿದ್ದ ಸಾಮಾಜಿಕ ವ್ಯವಸ್ಥೆಯಾಗಿತ್ತು. ಅದೇ ತುಳುವರ ಕೌಟುಂಬಿಕ ವ್ಯವಸ್ಥೆಯಾಗಿತ್ತು. ಇಲ್ಲಿ ಹೆಣ್ಣಿಗೆ ಮಾತ್ರ ಆಸ್ತಿಯ ಒಡೆತನವಿತ್ತು. ದುಡಿಯುತ್ತ ಬದುಕನ್ನು ಬಂಗಾರವಾಗಿಸುವುದು ಗಂಡುಹೆಣ್ಣಿಗೆ ಇದರಿಂದ ಅನಿವಾರ್ಯವಾಗಿತ್ತು. ಪುರುಷನ ದಬ್ಬಾಳಿಕೆ ಸ್ತ್ರೀಯರ ಮೇಲೆ ಅಸಾಧ್ಯವಾಗಿತ್ತು. ವಿಧವೆಯರಿಗೆ ಅಂಗವಿಕಲರಿಗೆ ಆಶ್ರಯವಿರುತ್ತಿತ್ತು.
ಈ ಮಾತೃಪ್ರಧಾನ ಪದ್ಧತಿಯಿರುವ ಕೌಟುಂಬಿಕ ವ್ಯವಸ್ಥೆಯನ್ನು ನಾಶಪಡಿಸದೆ ವೈದಿಕ ಸಂಸ್ಕೃತಿಯನ್ನು ಪ್ರಚಾರ ಮಾಡುವುದು ಅಸಾಧ್ಯವಾಗಿತ್ತು. ಅದಕ್ಕಾಗಿ ವೈದಿಕ ಸಂಸ್ಕೃತಿ ಜಾಣ್ಮೆಯಿಂದಲೇ ತುಳುವರ ಕೌಟುಂಬಿಕ ಕಲಹವನ್ನು ‘ಅಳಿಯ ಸಂತಾನ ಕಟ್ಟು’ಎಂಬ ನಾಟಕ ಹುಟ್ಟು ಹಾಕಿತ್ತು. ಇದರಿಂದ ತಾಯಿಯಿಂದ ಮಗಳಿಗೆ ಬರುತ್ತಿದ್ದ ಆಸ್ತಿಯ ಹಕ್ಕು ಮಾವನಿಂದ ಅಳಿಯನಿಗೆ ಎಂದಾಗ ತುಳುನಾಡಿನ ತಾಯಂದಿರು ಕಂಗೆಟ್ಟರು. ಅತಂತ್ರರಾದರು. ಆದರೆ ಹೊಸ ವ್ಯವಸ್ಥೆಯನ್ನು ಪ್ರತಿಭಟಿಸಿದರೆ ಕೌಟುಂಬಿಕ ಕಲಹ ಅನಿವಾರ್ಯವಾಗುತ್ತಿತ್ತು.
ಅದು ನಮ್ಮ ತಾಯಂದಿರಿಗೆ ಬೇಡವಾಗಿತ್ತು. ಪ್ರಾಯಶಃ ಜಗತ್ತಿನ ಇತಿಹಾಸದಲ್ಲಿ ಆಸ್ತಿಯನ್ನು ಒಬ್ಬರಿಂದ ಇನ್ನೊಬ್ಬರು ಈ ರೀತಿಯ ನಯವಂಚನೆಯಿಂದ ಪಡೆದ ದಾಖಲೆಯಿರಲಾರದು. ಇದಕ್ಕೆ ಭೂತಾಳಪಾಂಡೆಯ ಕಟ್ಟುಕತೆಯೊಂದು ಸಮರ್ಥನೆಯ ರೂಪದಲ್ಲಿ ಪ್ರಚಾರ ಪಡೆಯಿತು. ಅಂದೇ ತುಳು ಸಂಸ್ಕೃತಿಯ ನಾಶಕ್ಕೆ ಬೀಜಾಂಕುರವಾಗಿತ್ತು.
ಸ್ವತಂತ್ರ ಭಾರತದಲ್ಲಿಯ ಸಂವಿಧಾನ ಈಗ ಗಂಡು ಹೆಣ್ಣಿನ ಸಮಾನತೆಯನ್ನು ಎತ್ತಿ ಹಿಡಿದು ಆಸ್ತಿಯಲ್ಲಿ ಸಮಪಾಲಿನ ಕಾಯಿದೆ ಮಾಡಿದ್ದು ಪುರುಷ ಪ್ರಧಾನ ವ್ಯವಸ್ಥೆಯ ಅಬ್ಬರವನ್ನು ಸ್ವಲ್ಪಮಟ್ಟಿಗೆ ತಣಿಸಿದೆ. ಹಾಗಿದ್ದೂ ಪುನರಪಿ ಮನುವಿನ ಸಂವಿಧಾನವನ್ನು ಊರ್ಜಿತಗೊಳಿಸುವ ಪ್ರಯತ್ನ ಈಗ ಬಹಿರಂಗವಾಗಿ ಸೀಮಿತ ಗುಂಪೊಂದು ನಡೆಸುತ್ತಿರುವುದನ್ನು ನಾವೆಲ್ಲಾ ಸಂಘಟಿತರಾಗಿ ತಡೆಯದಿದ್ದರೆ ಮಾನವ ಹಕ್ಕಿಗೆ ಧಕ್ಕೆಯಾಗಬಹುದು.
ತುಳು ಸಂಸ್ಕೃತಿಯ ವಿಶಿಷ್ಟತೆಗಳನ್ನು ವಿವೇಚಿಸಿದ ನಂತರ ತುಳುವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ದೊರೆಯುತ್ತದೆ. ನಿಸರ್ಗದ ಆರಾಧಕರು, ಮೂರ್ತಿ ಪೂಜೆ, ಪುನರ್ಜನ್ಮ, ಸ್ವರ್ಗ-ನರಕ ಇತ್ಯಾದಿಗಳಲ್ಲಿ ನಂಬಿಕೆಯಿರದವರು ತುಳು ಸಂಸ್ಕೃತಿಯ ವಾರಸುದಾರರು, ಇವರಿಗೆ ಪರಿಸರವೇ ಸ್ವರ್ಗ. ಹಿಂದೆ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಒಪ್ಪಿದವರು ತುಳುವರು. ಈಗ ಅನೇಕ ತುಳುವರ ಭಾಷೆ ತುಳುವಾಗಿರದಿದ್ದರೂ ಅವರ ಆಚಾರ ವಿಚಾರದಲ್ಲಿ ತುಳು ಸಂಸ್ಕೃತಿಯ ಸಿರಿತನವಿದೆ. ಇಂತವರೆಲ್ಲಾ ತುಳುವರು.
ತುಳುವರು ಅಂಧಾನುಕರಣೆಯ ವ್ಯಾಮೋಹದಿಂದ ದೂರನಿಂತು, ಇಂದು ವಿಶ್ವದಾದ್ಯಂತ ಪಸರಿಸಿರುವ ತನ್ನವರನ್ನೆಲ್ಲಾ ಸಾಂಸ್ಕೃತಿಕವಾಗಿ ಗುರುತಿಸುವ ಕೆಲಸಕ್ಕೆ ಕಟಿಬದ್ಧರಾಗಬೇಕಾಗಿದೆ. ಅದರ ಜೊತೆಗೆ ಅನ್ಯ ಸಂಸ್ಕೃತಿಯ ತುಳು ಯಾ ಇತರ ಭಾಷಿಕರೊಡನೆ ಸಾಮರಸ್ಯವನ್ನು ಸಾಧಿಸಬೇಕಾಗಿದೆ. ತುಳು ಸಾಹಿತ್ಯ ಕಲೆಗಳಲ್ಲಿ ಮೂಲ ತುಳು ಸಂಸ್ಕೃತಿಯ ಸೊಬಗು ಮಾಯವಾಗಿ ಕೇವಲ ತುಳು ಭಾಷೆಯು ಮಾತ್ರ ಉಳಿದರೆ ಇದು ಅವರ ಸಾಂಸ್ಕೃತಿಕ ದುರಂತವಾದೀತು.
ರವಿ. ರಾ. ಆಂಚನ್
ತುಳುನಾಡಿನಲ್ಲಿ ಮರದ ಆರಾಧನೆಯನ್ನು ಮಾಡುವುದನ್ನು ನಾವು ನೋಡುತ್ತೇವೆ. ಅದರಂತೆ ತುಳುನಾಡಿನ ಜನರಲ್ಲಿ ವೃಕ್ಷದ ಬಗ್ಗೆ ವಿಶೇಷ ನಂಬಿಕೆ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ತೆಂಗಿನಕಾಯಿಯ ಬಗ್ಗೆ ವಿಚಿತ್ರ ಘಟನೆಗಳು ನಡೆದಿದೆ ಎಂದು ಹೇಳುತ್ತಾರೆ. ತೆಂಗಿನ ಮರದ ಬಗ್ಗೆ ನಾನಾ ತರಹದ ನಂಬಿಕೆಗಳು ಇದೆ. ಇದು ಸಮುದ್ರ ಮಥನ ನಡೆಯುವಾಗ ಎದ್ದು ಬಂದ ವಸ್ತು ಎಂದು ಹೇಳುತ್ತಾರೆ. ರಾಮಾಯಾಣದ ಕಥೆಯಲ್ಲಿ ತೆಂಗಿನ ಮರವನ್ನು ಕತ್ತರಿದಷ್ಟು ಮತ್ತೆ ಚಿಗುರುತ್ತಿತ್ತು ಎಂದು ಇದೆ. ಏಳು ತೆಂಗಿನ ಮರಗಳು ಕಿಷ್ಕಿಂದಾ ಪಟ್ಟಣದಲ್ಲಿ ಇತ್ತು. ಶ್ರೀರಾಮಚಂದ್ರ ಒಂದೇ ಬಾಣದಿಂದ ಅವುಗಳನ್ನು ಕತ್ತರಿಸಿ ಮುಂದೆ ತೆಂಗಿನ ಮರ ಮತ್ತೆ ಚಿಗುರದಂತೆ ಮಾಡಿದನು ಎಂದು ತಿಳಿದುಬರುತ್ತದೆ.
ನಮ್ಮ ತುಳುನಾಡಿನ ಜನರಿಗೆ ತೆಂಗಿನ ಮರ ಮತ್ತು ತೆಂಗಿನಕಾಯಿ ಬಹಳ ಶುಭ ಸೂಚಕಗಳು. ನಾವು ದಾರಿಯಲ್ಲಿ ನಡೆಯುತ್ತಿರುವಾಗ ತೆಂಗಿನಕಾಯಿ ಮರದಿಂದ ಉದುರಿ ಬಿದ್ದರೆ ಇದೊಂದು ಶುಭ ಶಕುನ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ ತೆಂಗಿನ ಮರವನ್ನು ನೋಡಿದರೆ ಆ ದಿನವು ಶುಭ ದಿನವೆಂದು ಹೇಳುತ್ತಾರೆ. ಶುಭ ಸಂಕೇತಕ್ಕೆ ಮನೆಯ ಎದುರು ತೆಂಗಿನ ಮರಗಳನ್ನು ಹಿರಿಯರು ನೆಡುತ್ತಿದ್ದರು. ಕೃಷಿಕರ ಗದ್ದೆಯ ಹುಣಿಯಲ್ಲಿ ತೆಂಗಿನ ಮರಗಳನ್ನು ನೆಡುವುದನ್ನು ನಾವು ನೋಡಿದ್ದೇವೆ.
ಹಿಂದಿನ ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪಾಡ್ಯಕ್ಕೆ ತೆಂಗಿನ ಸಸಿ ನೆಡುವುದು ಸಾಮಾನ್ಯ. ಇದರಿಂದ ಪುಣ್ಯ ಸಂಪಾದನೆಯಾಗುತ್ತದೆ ಎಂದು ಹೇಳುತ್ತಾರೆ. ನಮ್ಮ ಹಿರಿಯರು ಒಂದು ತೆಂಗಿನ ಮರ ಕಡಿದರೆ ಇನ್ನೊಂದು ತೆಂಗಿನ ಗಿಡ ನೆಡುವ ಕ್ರಮ ಇಟ್ಟುಕೊಂಡಿದ್ದರು. ಹಿರಿಯರ ಕಾಲದಲ್ಲಿ ತೆಂಗಿನ ಮರ ಕಡಿಯಲು ಯಾರೂ ಒಪ್ಪುತ್ತಿರಲಿಲ್ಲ. ಅಗತ್ಯದ ಸಮಯದಲ್ಲಿ ಮನೆಯ ಯಜಮಾನನಲ್ಲಿ ಮರ ಕಡಿಯುತ್ತೇವೆ ಎಂದು ಮೂರು ಸಾರಿ ಹೇಳಿ ನಂತರ ಕಡಿಯುತ್ತಿದ್ದರಂತೆ. ಮರ ಕಡಿಯುವವರು ತನಗೆ ಪಾಪ ಬರದಂತೆ, ಅದು ಯಜಮಾನನಿಗೆ ಬರುವಂತೆ ಅವರಿಂದಲೇ ತೆಂಗಿನ ಮರಕ್ಕೆ ಕೊಡಲಿಯಿಂದ ಎರಡು ಪೆಟ್ಟು ಹಾಕಿಸುವ ಕ್ರಮ ಇತ್ತು. ಹಿರಿಯರ ಕಾಲದಲ್ಲಿ ಮಂಗಳವಾರ, ಭಾನುವಾರ ತೆಂಗಿನ ಮರಕ್ಕೆ ತೆಂಗಿನಕಾಯಿ ಕೊಯ್ಯಲು ಮರ ಹತ್ತುತ್ತಿರಲಿಲ್ಲ.
ಸಾಮಾನ್ಯವಾಗಿ ತೆಂಗಿನ ಮರವನ್ನು ಮನೆಯ ಮಾಡಿಗೆ ಉಪಯೋಗಿಸುವುದಿದೆ. ಸಿಡಿಲು ಬಡಿದು ಸತ್ತ ಮರವನ್ನು ಮನೆಗೆ ಉಪಯೋಗಿಸುತ್ತಿರಲಿಲ್ಲ. ಇದು ಅಶುಭ ಎಂದು ಹೇಳುತ್ತಿದ್ದರು. ದೇವಸ್ಥಾನಕ್ಕೆ ತೆಂಗಿನ ಸಸಿಗಳನ್ನು ಹರಕೆ ಕೊಡುವುದನ್ನು ನಾವು ನೋಡಿದ್ದೇವೆ. ತೆಂಗಿನ ಸಸಿಗಳನ್ನು ದಾನ ಕೊಡುವುದೂ ಇದೆ. ತೆಂಗಿನ ಕಾಯಿ ಮತ್ತು ಸೀಯಾಳ ಕದ್ದ ದೂರನ್ನು ದೈವ ಸ್ವೀಕಾರ ಮಾಡುವುದಿಲ್ಲ. ಏಕೆಂದರೆ ದೈವದ ಬಂಡಿ ಎಳೆಯಲು ಬೇಕು ಎಂದು. ಹಿಂದಿನ ಕಾಲದಿಂದಲೂ ಸೀಯಳ ಅಭಿಷೇಕ ಮಾಡುವ ಕ್ರಮ ಇದೆ. ಮಳೆ ಬಾರದಿದ್ದಾಗ ಸೀಯಾಳ ಅಭಿಷೇಕವನ್ನು ದೇವರಿಗೆ ನೀಡಿದಾಗ ತಕ್ಷಣ ಮಳೆ ಬಂದ ಉದಾಹರಣೆಯನ್ನು ಬಹಳ ಮಂದಿ ಹೇಳುತ್ತ್ತಾರೆ. ದೇವಸ್ಥಾನ, ದೈವಸ್ಥಾನದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸೀಯಾಳ, ತೆಂಗಿನಕಾಯಿ ಬೇಕೇಬೇಕು. ದೈವಗಳಿಗೆ ಸೇವೆ ಸರಿಯಾಗಿ ಸಲ್ಲಿಕೆ ಆಗಿದೆಯೋ ಎಂದು ನೋಡಬೇಕಾದರೆ ತೆಂಗಿನಕಾಯಿ ಹೊಡೆಯುವ ಕಲ್ಲಿಗೆ ಹೊಡೆದಾಗ ಅದು ಎರಡು ಭಾಗವಾಗಿ ಮೇಲ್ಮುಖ ಮಾಡಿದರೆ ದೈವಕ್ಕೆ ಸಲ್ಲಿಕೆಯಾಗಿದೆ ಎಂದು ಸ್ಪಷ್ಟವಾಯಿತೆಂದು ಹಿರಿಯರು ಹೇಳುತ್ತಿದ್ದರು.
ದೇವಸ್ಥಾನದಲ್ಲಿ, ದೈವಸ್ಥಾನದಲ್ಲಿ ನೇಮ, ತಂಬಿಲ ಆಗುವಾಗ ಕೊಡಿ ಕಟ್ಟುವ ಕ್ರಮ ಇದೆ. ಕೊಡಿ ಕಟ್ಟುವುದು ಎಂದರೆ ಒಂದು ಬಿಳಿ ವಸ್ತ್ರವನ್ನು ನೇಮದ ಚಪ್ಪರ ಅಥವಾ ದೈವಸ್ಥಾನದ ಒಳಗೆ ಕಟ್ಟಿ ಅದರ ಮಧ್ಯದಲ್ಲಿ ಒಂದು ತೆಂಗಿನಕಾಯಿಯನ್ನು ಕಟ್ಟುವುದು. ಈ ಕ್ರಮ ಹಿಂದಿನಿಂದಲೂ ಇದೆ. ಮದುವೆಯಂತಹ ಶುಭ ಕೆಲಸಗಳು ನಡೆಯುವ ಸಂದರ್ಭದಲ್ಲಿ ಮನೆಯ ಎದುರು ಚಪ್ಪರಕ್ಕೆ ಕೊಡಿ ಕಟ್ಟುತ್ತಾರೆ. ಇದಕ್ಕೆ ತೆಂಗಿನಕಾಯಿ ಬೇಕೇ ಬೇಕು. ದೈವಸ್ಥಾನದಲ್ಲಿ ಉತ್ಸವದ ಸಮಯದಲ್ಲಿ ಊರಿನ ಗಣ್ಯರಿಗೆ ತೆಂಗಿನಕಾಯಿಯನ್ನು ಕೊಟ್ಟು ಅದನ್ನು ದೇವರ ಬಲಿ ಕಲ್ಲಿನ ಪಕ್ಕ ಪೂಜೆ ಮಾಡಿ ನಂತರ ತೆಂಗಿನಕಾಯಿಯನ್ನು ಒಡೆಯುವ ಕ್ರಮ ಇದೆ. ದೇವಸ್ಥಾನದ ರಥ, ದೈವಸ್ಥಾನದ ಬಂಡಿ ಬಲಿಗೆ ಹೊರಡುವಾಗ ತೆಂಗಿನಕಾಯಿಯನ್ನು ಚಕ್ರಗಳಿಗೆ ಒಡೆಯುವ ಕ್ರಮ ಇದೆ. ದೈವ, ದೇವರು ಸವಾರಿ ಹೋಗುವಾಗ ಮುಖ್ಯ ಸ್ಥಳಗಳಲ್ಲಿ ತೆಂಗಿನಕಾಯಿ ಒಡೆಯುವ ಕ್ರಮ ಇದೆ. ದೈವಸ್ಥಾನದ ವಾಲಗದವರಿಗೆ ದೈವ ಕುಣಿದು ತೆಂಗಿನಕಾಯಿಯನ್ನು ಕೊಡುವ ಕ್ರಮ ಇದೆ. ಊರಿನ ಗಡಿಗಾರರು, ಗುರಿಕಾರರಿಗೆ ದೈವ ಪ್ರಸಾದ ಕೊಡುವಾಗ ತೆಂಗಿನಕಾಯಿಯೊಂದಿಗೆ ಪ್ರಸಾದವನ್ನು ಕೊಡುವ ಕ್ರಮ ಇದೆ.
ಊರಿನಲ್ಲಿ ಅಷ್ಟಮಿ, ಚೌತಿ, ಹಬ್ಬ ಹರಿದಿನದಂದು ತೆಂಗಿನಕಾಯಿಯನ್ನು ಹಿಡಿದು ತಪ್ಪಂಗಾಯಿ ಹಾಕುವ ರೂಢಿ ಇದೆ. ತೆಂಗಿನಕಾಯಿಯ ಕಟ್ಟ ಅಂದರೆ ಇಬ್ಬರು ಎದುರು ಬದುರು ತೆಂಗಿನಕಾಯಿ ಯನ್ನು ಕೈಯಲ್ಲಿ ಹಿಡಿದು ಒಂದ ಕ್ಕೊಂದು ತಾಗಿಸಿದಾಗ ಯಾರ ತೆಂಗಿನ ಕಾಯಿ ಒಡೆಯುತ್ತದೆಯೋ ಅದನ್ನು ಒಡೆಯದ ತೆಂಗಿನಕಾಯಿಯವರಿಗೆ ಕೊಡುವ ಕ್ರಮ ಇದೆ.
ತೆಂಗಿನಕಾಯಿ ದೇವತೆಗಳ ಸಾನಿಧ್ಯ ವಿರುವ ಫಲವೆಂದು ನಂಬಿಕೆ ಇದೆ. ತೆಂಗಿನಕಾಯಿ ಬಿದ್ದು ಸತ್ತವರಿಗೆ ಸ್ವರ್ಗ ಪ್ರಾಪ್ತಿ ಎಂದು ಹೇಳುತ್ತಾರೆ. ದೇವರು ಮತ್ತು ದೈವವನ್ನು ದೇವಸ್ಥಾನ, ದೈವಸ್ಥಾನ ನಿರ್ಮಾಣ ಮಾಡುವ ಮೊದಲು ತೆಂಗಿನಕಾಯಿಯಲ್ಲಿ ಸಂಕೋಚ ಮಾಡುವ ಕ್ರಮ ಇದೆ. ದೈವಸ್ಥಾನದಲ್ಲಿ ದೈವದ ಅಚಕನು ತನ್ನ ಅರ್ಚಕ ಸ್ಥಾನವನ್ನು ಮತ್ತೊಬ್ಬನಿಗೆ ಬಿಟ್ಟು ಕೊಡುವಾಗ ತೆಂಗಿನಕಾಯಿಯ ಮೂಲಕ ಕೊಡುವ ಕ್ರಮ ಇದೆ. ಪ್ರೇತ, ಭೂತಗಳ ಉಪದ್ರವವಿರುವವರಿಗೆ ಮಂತ್ರವಾದಿ ತೆಂಗಿನಕಾಯಿಯನ್ನು ಮಂತ್ರಿಸಿ ಕೊಡುತ್ತಾರೆ. ಜಾನುವಾರುಗಳಿಗೆ ದೈವದ ದೃಷ್ಟಿ ಇದ್ದರೆ ಅದನ್ನು ತಪ್ಪಿಸಲು ತೆಂಗಿನಕಾಯಿಯನ್ನು ದನದ ಕೊಟ್ಟಿಗೆಗೆ ಕಟ್ಟಲು ಕೊಡುತ್ತಾರೆ. ದೈವಸ್ಥಾನದ ಶುಭ ಕೆಲಸಕ್ಕೆ ಮುಹೂರ್ತ ಕೇಳಲು ಪುರೋಹಿತರಲ್ಲಿಗೆ ಹೋಗುವಾಗ ತೆಂಗಿನಕಾಯಿ ಕಾಣಿಕೆ ನೀಡುವ ಕ್ರಮ ಇದೆ.
ಮನುಷ್ಯರು ಮೃತರಾದಾಗ ಮೃತ ದೇಹದ ತಲೆಯ ಬಳಿ ದೀಪ ಇಡಲು ತೆಂಗಿನಕಾಯಿಯ ಹೋಳುಗಳು ಬೇಕು. ಮದುವೆಯ ಸಮಾರಂಭದಲ್ಲಿ ಪುರೋಹಿತರು ತೆಂಗಿನಕಾಯಿಯನ್ನು ಒಂದು ಕಲಶದ ಮೇಲೆ ಇಟ್ಟು ಕಲಶದಲ್ಲಿ ಹಾಕಿದ ನೀರನ್ನು ಗಂಡು ಹೆಣ್ಣಿನ ಕೈಗಳನ್ನು ಮೇಲೆ ಮೇಲೆ ಇಟ್ಟು ತೆಂಗಿನಕಾಯಿಯೊಂದಿಗೆ ಧಾರೆ ಎರೆದು ಕೊಡುವ ಕ್ರಮ ಈಗಲೂ ಇದೆ. ದೇವಸ್ಥಾನ, ದೈವಸ್ಥಾನದಲ್ಲಿ ಪೂಜೆ ನಡೆಯುವ ಮೊದಲು ಗಣಪತಿ ದೇವರಿಗೆ ತೆಂಗಿನಕಾಯಿಯಿಂದ ಸುತ್ತೆ ಇಡುತ್ತಾರೆ. ದೇವರ, ದೈವದ ಮೆರವಣಿಗೆ ಹೋಗುವಾಗ ಹೆಂಗಸರು ತೆಂಗಿನಕಾಯಿ ಇರುವ ಕಲಶವನ್ನು ಹಿಡಿದುಕೊಂಡು ಹೋಗುತ್ತಾರೆ. ದೇವರ ಪೂಜೆ ನಡೆಯುವ ಮೊದಲು ಒಂದು ತೆಂಗಿನಕಾಯಿಯನ್ನು ಹಿಡಿದು ಅಲ್ಲಿ ಸೇರಿದ ಎಲ್ಲರಿಂದಲೂ ಮುಟ್ಟಿಸುವ ಕ್ರಮ ಇದೆ. ಹೀಗೆ ತೆಂಗಿನಕಾಯಿ ಇಲ್ಲದೆ ಯಾವುದೇ ಶುಭ ಅಶುಭ ಕೆಲಸಗಳು ನಡೆಯುವುದಿಲ್ಲ. JAYAKIRANA.
ನಮ್ಮ ತುಳುನಾಡಿನ ಜನರಿಗೆ ತೆಂಗಿನ ಮರ ಮತ್ತು ತೆಂಗಿನಕಾಯಿ ಬಹಳ ಶುಭ ಸೂಚಕಗಳು. ನಾವು ದಾರಿಯಲ್ಲಿ ನಡೆಯುತ್ತಿರುವಾಗ ತೆಂಗಿನಕಾಯಿ ಮರದಿಂದ ಉದುರಿ ಬಿದ್ದರೆ ಇದೊಂದು ಶುಭ ಶಕುನ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ ತೆಂಗಿನ ಮರವನ್ನು ನೋಡಿದರೆ ಆ ದಿನವು ಶುಭ ದಿನವೆಂದು ಹೇಳುತ್ತಾರೆ. ಶುಭ ಸಂಕೇತಕ್ಕೆ ಮನೆಯ ಎದುರು ತೆಂಗಿನ ಮರಗಳನ್ನು ಹಿರಿಯರು ನೆಡುತ್ತಿದ್ದರು. ಕೃಷಿಕರ ಗದ್ದೆಯ ಹುಣಿಯಲ್ಲಿ ತೆಂಗಿನ ಮರಗಳನ್ನು ನೆಡುವುದನ್ನು ನಾವು ನೋಡಿದ್ದೇವೆ.
ಹಿಂದಿನ ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪಾಡ್ಯಕ್ಕೆ ತೆಂಗಿನ ಸಸಿ ನೆಡುವುದು ಸಾಮಾನ್ಯ. ಇದರಿಂದ ಪುಣ್ಯ ಸಂಪಾದನೆಯಾಗುತ್ತದೆ ಎಂದು ಹೇಳುತ್ತಾರೆ. ನಮ್ಮ ಹಿರಿಯರು ಒಂದು ತೆಂಗಿನ ಮರ ಕಡಿದರೆ ಇನ್ನೊಂದು ತೆಂಗಿನ ಗಿಡ ನೆಡುವ ಕ್ರಮ ಇಟ್ಟುಕೊಂಡಿದ್ದರು. ಹಿರಿಯರ ಕಾಲದಲ್ಲಿ ತೆಂಗಿನ ಮರ ಕಡಿಯಲು ಯಾರೂ ಒಪ್ಪುತ್ತಿರಲಿಲ್ಲ. ಅಗತ್ಯದ ಸಮಯದಲ್ಲಿ ಮನೆಯ ಯಜಮಾನನಲ್ಲಿ ಮರ ಕಡಿಯುತ್ತೇವೆ ಎಂದು ಮೂರು ಸಾರಿ ಹೇಳಿ ನಂತರ ಕಡಿಯುತ್ತಿದ್ದರಂತೆ. ಮರ ಕಡಿಯುವವರು ತನಗೆ ಪಾಪ ಬರದಂತೆ, ಅದು ಯಜಮಾನನಿಗೆ ಬರುವಂತೆ ಅವರಿಂದಲೇ ತೆಂಗಿನ ಮರಕ್ಕೆ ಕೊಡಲಿಯಿಂದ ಎರಡು ಪೆಟ್ಟು ಹಾಕಿಸುವ ಕ್ರಮ ಇತ್ತು. ಹಿರಿಯರ ಕಾಲದಲ್ಲಿ ಮಂಗಳವಾರ, ಭಾನುವಾರ ತೆಂಗಿನ ಮರಕ್ಕೆ ತೆಂಗಿನಕಾಯಿ ಕೊಯ್ಯಲು ಮರ ಹತ್ತುತ್ತಿರಲಿಲ್ಲ.
ಸಾಮಾನ್ಯವಾಗಿ ತೆಂಗಿನ ಮರವನ್ನು ಮನೆಯ ಮಾಡಿಗೆ ಉಪಯೋಗಿಸುವುದಿದೆ. ಸಿಡಿಲು ಬಡಿದು ಸತ್ತ ಮರವನ್ನು ಮನೆಗೆ ಉಪಯೋಗಿಸುತ್ತಿರಲಿಲ್ಲ. ಇದು ಅಶುಭ ಎಂದು ಹೇಳುತ್ತಿದ್ದರು. ದೇವಸ್ಥಾನಕ್ಕೆ ತೆಂಗಿನ ಸಸಿಗಳನ್ನು ಹರಕೆ ಕೊಡುವುದನ್ನು ನಾವು ನೋಡಿದ್ದೇವೆ. ತೆಂಗಿನ ಸಸಿಗಳನ್ನು ದಾನ ಕೊಡುವುದೂ ಇದೆ. ತೆಂಗಿನ ಕಾಯಿ ಮತ್ತು ಸೀಯಾಳ ಕದ್ದ ದೂರನ್ನು ದೈವ ಸ್ವೀಕಾರ ಮಾಡುವುದಿಲ್ಲ. ಏಕೆಂದರೆ ದೈವದ ಬಂಡಿ ಎಳೆಯಲು ಬೇಕು ಎಂದು. ಹಿಂದಿನ ಕಾಲದಿಂದಲೂ ಸೀಯಳ ಅಭಿಷೇಕ ಮಾಡುವ ಕ್ರಮ ಇದೆ. ಮಳೆ ಬಾರದಿದ್ದಾಗ ಸೀಯಾಳ ಅಭಿಷೇಕವನ್ನು ದೇವರಿಗೆ ನೀಡಿದಾಗ ತಕ್ಷಣ ಮಳೆ ಬಂದ ಉದಾಹರಣೆಯನ್ನು ಬಹಳ ಮಂದಿ ಹೇಳುತ್ತ್ತಾರೆ. ದೇವಸ್ಥಾನ, ದೈವಸ್ಥಾನದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸೀಯಾಳ, ತೆಂಗಿನಕಾಯಿ ಬೇಕೇಬೇಕು. ದೈವಗಳಿಗೆ ಸೇವೆ ಸರಿಯಾಗಿ ಸಲ್ಲಿಕೆ ಆಗಿದೆಯೋ ಎಂದು ನೋಡಬೇಕಾದರೆ ತೆಂಗಿನಕಾಯಿ ಹೊಡೆಯುವ ಕಲ್ಲಿಗೆ ಹೊಡೆದಾಗ ಅದು ಎರಡು ಭಾಗವಾಗಿ ಮೇಲ್ಮುಖ ಮಾಡಿದರೆ ದೈವಕ್ಕೆ ಸಲ್ಲಿಕೆಯಾಗಿದೆ ಎಂದು ಸ್ಪಷ್ಟವಾಯಿತೆಂದು ಹಿರಿಯರು ಹೇಳುತ್ತಿದ್ದರು.
ದೇವಸ್ಥಾನದಲ್ಲಿ, ದೈವಸ್ಥಾನದಲ್ಲಿ ನೇಮ, ತಂಬಿಲ ಆಗುವಾಗ ಕೊಡಿ ಕಟ್ಟುವ ಕ್ರಮ ಇದೆ. ಕೊಡಿ ಕಟ್ಟುವುದು ಎಂದರೆ ಒಂದು ಬಿಳಿ ವಸ್ತ್ರವನ್ನು ನೇಮದ ಚಪ್ಪರ ಅಥವಾ ದೈವಸ್ಥಾನದ ಒಳಗೆ ಕಟ್ಟಿ ಅದರ ಮಧ್ಯದಲ್ಲಿ ಒಂದು ತೆಂಗಿನಕಾಯಿಯನ್ನು ಕಟ್ಟುವುದು. ಈ ಕ್ರಮ ಹಿಂದಿನಿಂದಲೂ ಇದೆ. ಮದುವೆಯಂತಹ ಶುಭ ಕೆಲಸಗಳು ನಡೆಯುವ ಸಂದರ್ಭದಲ್ಲಿ ಮನೆಯ ಎದುರು ಚಪ್ಪರಕ್ಕೆ ಕೊಡಿ ಕಟ್ಟುತ್ತಾರೆ. ಇದಕ್ಕೆ ತೆಂಗಿನಕಾಯಿ ಬೇಕೇ ಬೇಕು. ದೈವಸ್ಥಾನದಲ್ಲಿ ಉತ್ಸವದ ಸಮಯದಲ್ಲಿ ಊರಿನ ಗಣ್ಯರಿಗೆ ತೆಂಗಿನಕಾಯಿಯನ್ನು ಕೊಟ್ಟು ಅದನ್ನು ದೇವರ ಬಲಿ ಕಲ್ಲಿನ ಪಕ್ಕ ಪೂಜೆ ಮಾಡಿ ನಂತರ ತೆಂಗಿನಕಾಯಿಯನ್ನು ಒಡೆಯುವ ಕ್ರಮ ಇದೆ. ದೇವಸ್ಥಾನದ ರಥ, ದೈವಸ್ಥಾನದ ಬಂಡಿ ಬಲಿಗೆ ಹೊರಡುವಾಗ ತೆಂಗಿನಕಾಯಿಯನ್ನು ಚಕ್ರಗಳಿಗೆ ಒಡೆಯುವ ಕ್ರಮ ಇದೆ. ದೈವ, ದೇವರು ಸವಾರಿ ಹೋಗುವಾಗ ಮುಖ್ಯ ಸ್ಥಳಗಳಲ್ಲಿ ತೆಂಗಿನಕಾಯಿ ಒಡೆಯುವ ಕ್ರಮ ಇದೆ. ದೈವಸ್ಥಾನದ ವಾಲಗದವರಿಗೆ ದೈವ ಕುಣಿದು ತೆಂಗಿನಕಾಯಿಯನ್ನು ಕೊಡುವ ಕ್ರಮ ಇದೆ. ಊರಿನ ಗಡಿಗಾರರು, ಗುರಿಕಾರರಿಗೆ ದೈವ ಪ್ರಸಾದ ಕೊಡುವಾಗ ತೆಂಗಿನಕಾಯಿಯೊಂದಿಗೆ ಪ್ರಸಾದವನ್ನು ಕೊಡುವ ಕ್ರಮ ಇದೆ.
ಊರಿನಲ್ಲಿ ಅಷ್ಟಮಿ, ಚೌತಿ, ಹಬ್ಬ ಹರಿದಿನದಂದು ತೆಂಗಿನಕಾಯಿಯನ್ನು ಹಿಡಿದು ತಪ್ಪಂಗಾಯಿ ಹಾಕುವ ರೂಢಿ ಇದೆ. ತೆಂಗಿನಕಾಯಿಯ ಕಟ್ಟ ಅಂದರೆ ಇಬ್ಬರು ಎದುರು ಬದುರು ತೆಂಗಿನಕಾಯಿ ಯನ್ನು ಕೈಯಲ್ಲಿ ಹಿಡಿದು ಒಂದ ಕ್ಕೊಂದು ತಾಗಿಸಿದಾಗ ಯಾರ ತೆಂಗಿನ ಕಾಯಿ ಒಡೆಯುತ್ತದೆಯೋ ಅದನ್ನು ಒಡೆಯದ ತೆಂಗಿನಕಾಯಿಯವರಿಗೆ ಕೊಡುವ ಕ್ರಮ ಇದೆ.
ತೆಂಗಿನಕಾಯಿ ದೇವತೆಗಳ ಸಾನಿಧ್ಯ ವಿರುವ ಫಲವೆಂದು ನಂಬಿಕೆ ಇದೆ. ತೆಂಗಿನಕಾಯಿ ಬಿದ್ದು ಸತ್ತವರಿಗೆ ಸ್ವರ್ಗ ಪ್ರಾಪ್ತಿ ಎಂದು ಹೇಳುತ್ತಾರೆ. ದೇವರು ಮತ್ತು ದೈವವನ್ನು ದೇವಸ್ಥಾನ, ದೈವಸ್ಥಾನ ನಿರ್ಮಾಣ ಮಾಡುವ ಮೊದಲು ತೆಂಗಿನಕಾಯಿಯಲ್ಲಿ ಸಂಕೋಚ ಮಾಡುವ ಕ್ರಮ ಇದೆ. ದೈವಸ್ಥಾನದಲ್ಲಿ ದೈವದ ಅಚಕನು ತನ್ನ ಅರ್ಚಕ ಸ್ಥಾನವನ್ನು ಮತ್ತೊಬ್ಬನಿಗೆ ಬಿಟ್ಟು ಕೊಡುವಾಗ ತೆಂಗಿನಕಾಯಿಯ ಮೂಲಕ ಕೊಡುವ ಕ್ರಮ ಇದೆ. ಪ್ರೇತ, ಭೂತಗಳ ಉಪದ್ರವವಿರುವವರಿಗೆ ಮಂತ್ರವಾದಿ ತೆಂಗಿನಕಾಯಿಯನ್ನು ಮಂತ್ರಿಸಿ ಕೊಡುತ್ತಾರೆ. ಜಾನುವಾರುಗಳಿಗೆ ದೈವದ ದೃಷ್ಟಿ ಇದ್ದರೆ ಅದನ್ನು ತಪ್ಪಿಸಲು ತೆಂಗಿನಕಾಯಿಯನ್ನು ದನದ ಕೊಟ್ಟಿಗೆಗೆ ಕಟ್ಟಲು ಕೊಡುತ್ತಾರೆ. ದೈವಸ್ಥಾನದ ಶುಭ ಕೆಲಸಕ್ಕೆ ಮುಹೂರ್ತ ಕೇಳಲು ಪುರೋಹಿತರಲ್ಲಿಗೆ ಹೋಗುವಾಗ ತೆಂಗಿನಕಾಯಿ ಕಾಣಿಕೆ ನೀಡುವ ಕ್ರಮ ಇದೆ.
ಮನುಷ್ಯರು ಮೃತರಾದಾಗ ಮೃತ ದೇಹದ ತಲೆಯ ಬಳಿ ದೀಪ ಇಡಲು ತೆಂಗಿನಕಾಯಿಯ ಹೋಳುಗಳು ಬೇಕು. ಮದುವೆಯ ಸಮಾರಂಭದಲ್ಲಿ ಪುರೋಹಿತರು ತೆಂಗಿನಕಾಯಿಯನ್ನು ಒಂದು ಕಲಶದ ಮೇಲೆ ಇಟ್ಟು ಕಲಶದಲ್ಲಿ ಹಾಕಿದ ನೀರನ್ನು ಗಂಡು ಹೆಣ್ಣಿನ ಕೈಗಳನ್ನು ಮೇಲೆ ಮೇಲೆ ಇಟ್ಟು ತೆಂಗಿನಕಾಯಿಯೊಂದಿಗೆ ಧಾರೆ ಎರೆದು ಕೊಡುವ ಕ್ರಮ ಈಗಲೂ ಇದೆ. ದೇವಸ್ಥಾನ, ದೈವಸ್ಥಾನದಲ್ಲಿ ಪೂಜೆ ನಡೆಯುವ ಮೊದಲು ಗಣಪತಿ ದೇವರಿಗೆ ತೆಂಗಿನಕಾಯಿಯಿಂದ ಸುತ್ತೆ ಇಡುತ್ತಾರೆ. ದೇವರ, ದೈವದ ಮೆರವಣಿಗೆ ಹೋಗುವಾಗ ಹೆಂಗಸರು ತೆಂಗಿನಕಾಯಿ ಇರುವ ಕಲಶವನ್ನು ಹಿಡಿದುಕೊಂಡು ಹೋಗುತ್ತಾರೆ. ದೇವರ ಪೂಜೆ ನಡೆಯುವ ಮೊದಲು ಒಂದು ತೆಂಗಿನಕಾಯಿಯನ್ನು ಹಿಡಿದು ಅಲ್ಲಿ ಸೇರಿದ ಎಲ್ಲರಿಂದಲೂ ಮುಟ್ಟಿಸುವ ಕ್ರಮ ಇದೆ. ಹೀಗೆ ತೆಂಗಿನಕಾಯಿ ಇಲ್ಲದೆ ಯಾವುದೇ ಶುಭ ಅಶುಭ ಕೆಲಸಗಳು ನಡೆಯುವುದಿಲ್ಲ. JAYAKIRANA.
ತುಳುವಲ್ಲಿ ಮುಗುಡು ಮೀನು ಇಂಗ್ಲೀಷಲ್ಲಿ ‘ಕ್ಯಾಟ್ ಫಿಷ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಈ ಮೀನಿಗೆ ಕ್ಯಾಟ್ಫಿಶ್ ಎಂದು ಹೆಸರು ಬರಲು ಮುಖ್ಯ ಕಾರಣ ಇದಕ್ಕೆ ಬೆಕ್ಕಿನಂತಹ ಮೀಸೆ ಇದೆ. ಆದ್ದರಿಂದ ಇದನ್ನು ಕನ್ನಡದಲ್ಲಿ ಬೆಕ್ಕುಮೀನು ಎಂದೂ ಕರೆಯಬಹುದು. ಈ ಮೀನಿ ನಿಂದ ನಾವು ಕಲಿಯುವುದು ಬೇಕಾದಷ್ಟಿದೆ.
ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿ ಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಸಿಗಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ.
ಜೂನ್ ತಿಂಗಳು ಬರುವ ಮೊದಲ ಮಳೆಗೆ ಊರಿನ ಯುವಕ ರೆಲ್ಲಾ ಸೇರಿಕೊಂಡು ಉಬರ್ ಹಿಡಿಯಲು ಹೋಗುತ್ತಾರೆ. ಜೋರಾಗಿ ನೆರೆ ಬಂದ್ದಿದ್ದರೆ ಉಬರ್ ಸಕ್ಸಸ್ ಎಂದೇ ಅರ್ಥ. ತೋಡಲ್ಲಿ ರಭಸವಾಗಿ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವ ಮಧ್ಯೆ ಮಗುಡು ಮೀನಿನಂತಹ ಹಲವಾರ ಮೀನುಗಳು ಸಂಚಾರ ನಡೆಸುತ್ತಿರುತ್ತದೆ. ಅದನ್ನು ಹಿಡಿಯುವುದೇ ಉಬರ್ ಹೊರಟವರ ಉದ್ದೇಶ. ಮಣ್ಣು ಮಿಶ್ರಿತ ನೀರಲ್ಲಿ ಇಂಥಾ ಮೀನುಗಳು ಕಾಣ ಸಿಗುವುದೇ ಇಲ್ಲ. ಅದಕ್ಕಾಗಿ ಪೆಟ್ರೋಮ್ಯಾಕ್ಸ್ ದೀಪ, ಪ್ರಖರ ಬೆಳಕು ಬೀರುವ ಟಾರ್ಚ್ಲೈಟ್ಗಳನ್ನು ಹಿಡಿದುಕೊಂಡು ಹೋಗು ತ್ತಾರೆ. ಅದರ ಜೊತೆಗೆ ಹರಿತವಾದ ಮಚ್ಚು, ಲಾಂಗುಗಳು. ಕೆಸರು ಮಿಶ್ರಿತ ತೂತುಗಳಿಂದ ಇಂಥಾ ಮೀನುಗಳು ಒಂದೊಂದಾ ಗಿಯೇ ಹೊರಗೆ ಬರುತ್ತಿರುವಂತೆ ಇದನ್ನೇ ಕಾಯುತ್ತಿರುವ ಉಬರ್ ಹಿಡಿಯುವವರು ಮೀನು ಹೊರಬಂದ ತಕ್ಷಣ ತನ್ನ ಹರಿತವಾದ ಕತ್ತಿಯಿಂದ ಆಹುತಿ ಮಾಡಿ ಬಿಡುತ್ತಾರೆ.
ಈ ಮೀನನ್ನು ಹಿಒಡಿಯುವಾಗ ಕೊಂಚ ತಪ್ಪಿದರೂ ಅದರ ಭರ್ಚಿಯಂತಹಾ ಮುಳ್ಳು ತಮ್ಮ ಕೈಗೆ ತಾಗಿ ದೊಡ್ಡದಾದ ಗಾಯ ಮಾಡಿಬಿಡಬಲ್ಲುದು. ಅಷು ಚಾಣಾಕ್ಷರು ಮಾತ್ರ ಉಬರ್ ಹಿಡಿಯ ಬಲ್ಲರು. ಇದರ ಬಗ್ಗೆ ಮಾಹಿತಿ ಇಲ್ಲದವರಿಗೆ ಒಂದು ಮೀನೂ ಸಿಗಲು ಸಾಧ್ಯವೇ ಇಲ್ಲ.
ಮುಗುಡು ಮೀನಿನ ಜಾತಿಗೆ ಸೇರಿದ ಮೀನುಗಳು ಪ್ರಪಂಚದ ಹಲವಾರು ಕಡೆಗಳಲ್ಲಿ ಕಾಣಸಿಗುತ್ತದೆ. ಆದರೆ ದ.ಭಾರತದ ಕರ್ನಾಟಕದ ಹಿನ್ನೀರಿನಲ್ಲಿ ಸಿಗುವ ಈ ಮೀನುಗಳೇ ಬಹಳ ಅಚ್ಚರಿದಾಯಕ ಪ್ರಾಣಿಗಳು. ನಮಗೆ ಗೊತ್ತಿರುವಂತೆ ನದಿ, ತೋಡುಗಳಲ್ಲಿ ವರ್ಷಪೂರ್ತಿ ನೀರಿರುವುದಿಲ್ಲ. ಈ ನೀರಿರದ ಸಂದರ್ಭದಲ್ಲಿ ಇದರಲ್ಲಿರುವ ಮೀನುಗಳು ಎಲ್ಲಿಗೆ ಹೋಗುತ್ತದೆ, ಅದು ಎಲ್ಲಿ ಜೀವಿಸುತ್ತದೆ ಎಂಬ ಸಂಶಯ ನಮ್ಮನ್ನು ಕಾಡುತ್ತದೆ.
ಹೌದು ವಿಷಯ ಇಲ್ಲಿಯೇ ಇರುವುದು. ಮಳೆ ನಿಂತೊಡನೆ ತೋಡು ನದಿ, ಕೊಳಗಳಲ್ಲಿ ನೀರು ಆವಿಯಾಗಿ ಆ ಜಾಗದಲ್ಲಿ ನೀರಿತ್ತೆಂಬುದಕ್ಕೆ ಸಾಕ್ಷಿ ಸಹ ಇರುವುದಿಲ್ಲ. ಆದರೂ ಮಳೆ ಆರಂಭವಾಗುತ್ತಿದ್ದಂತೆ ಎಲ್ಲೋ ಅದೃಶ್ಯವಾಗಿದ್ದ ಈ ಮೀನುಗಳು ಮತ್ತೆ ಅದೇ ಜಾಗದಲ್ಲಿ ಪ್ರತ್ಯಕ್ಷವಾತ್ತದೆ. ಅಷ್ಟೇ ಏಕೆ ಅದರೊಂದಿಗೆ ತನ್ನ ಮರಿಗಳನ್ನೂ ಕಟ್ಟಿಕೊಂಡು ಅಲ್ಲೊಂದು ದೊಡ್ಡ ಸಂಸಾರ ಮಾಡತೊಡಗುತ್ತದೆ. ನೀರಿರುವವರೆಗೆ ಸಂತಸದಿಂದ ಬದುಕುವ ಈ ಜೀವಿಗಳ ಹೋರಾಟಮಯ ಜಿವನ ಆರಂಭವಾಗುವುದು ಅಲ್ಲಿಯ ನೀರು ಸಂಪೂರ್ಣವಾಗಿ ಬತ್ತಿಹೋದ ಮೇಲೆಯೇ.
ನೀರಿರುವ ತಾಣಗಳಲ್ಲಿ ನೀರು ಆವಿಯಾಗುತ್ತಿದ್ದಂತೆ ಕೊಕ್ಕರೆ, ಮಿಂಂಚುಳ್ಳಿ, ಬಕ, ನೀರುಕಾಗೆ ಮುಂತಾದ ಪಕ್ಷಿಗಳು ಅಲ್ಲಿರುವ ಮೀನುಗಳನ್ನು ಸ್ವಾಹಾ ಮಾಡಲು ಶುರುಮಾಡುತ್ತದೆ. ಇದರ ಬಾಯಿಗೆ ಆಹುತಿಯಾಗಿ ಅಳಿದುಳಿದ ಮೀನುಗಳೇ ಮುಂದಿನ ಮಳೆಗಾಲದಲ್ಲಿ ಕಾಣಸಿಗುವ ಮಿನುಗಳು. ಮುಗುಡು ಮೀನಿನ ಮೈಮೇಲೆ ಜೆಲ್ಲಿಯಂತಹಾ ವಸ್ತುವೊಂದಿದೆ. ಇದಿರುವುದರಿಂದಲೇ ಈ ಮೀನನ್ನು ಹಿಡಿದರೆ ನಮಗೆ ಜಾರುವ ಅನುಭವವಾಗುತ್ತದೆ. ಹೀಗಾಗಿ ಈ ಮೀನು ಸುಲಭವಾಗಿ ಇತರ ಪ್ರಾಣಿಗಳ ಬಾಯಿಗೆ ತುತ್ತಾಗುವುದಿಲ್ಲ.
ನೀರು ಆವಿಯಾಗುತ್ತಿದ್ದಂತೆ ಬುದ್ಧಿವಂತಿಕೆ ತೋರಿಸುವ ಈ ಮೀನು ಸುತ್ತಲಿರುವ ಕೆಸರನ್ನು ತನ್ನ ದೇಹದ ಸುತ್ತಾ ಮೆತ್ತಿಕೊಳ್ಳಲು ಸುರುಮಾಡುತ್ತದೆ. ಅಥವಾ ಇದೇ ಮೀನು ಕೆಸರಿರುವ ಜಾಗಕ್ಕೆ ತುರುಕಿಕೊಂಡು ಅಲಿಂದ ಹೊರಬರುವುದೇ ಇಲ್ಲ. ಇದರಲ್ಲೂ ಯಾವುದಾದರೂ ಕೆಲವು ಅದೃಷ್ಟವಂತ ಮೀನುಗಳು ನೀರಿರುವ ಜಾಗಕ್ಕೆ ಬಂದು ತಲುಪುತ್ತದೆ. ಅಲ್ಲೂ ಈ ಮೀನುಗಳು ಬಾಕಿ ಮೀನುಗಳಂತೆ ಈಜಿಕೊಂಡಿರುವುದಿಲ್ಲ. ಯಾವುದಾದರೂ ಒಂದು ಸಂದಿನಲ್ಲೋ ಅಥವಾ ಕೆಸರು ಪ್ರದೇಶದಲ್ಲೋ ಅವಿತುಕೊಂಡಿ ರುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಈ ಮೀನುಗಳನ್ನು ನೋಡು ವುದು ಕಷ್ಟ ಸಾಧ್ಯ.
ಕೆಸರು ಸುತ್ತಲಿರುವ ಕಾರಣ ಮಳೆಗಾಲ ಸಂಪೂರ್ಣ ನಿಂತು ಬಿಸಿಲು ಬೀಳುತ್ತಿದ್ದಂತೆ ಅದರ ಮೇಲೆ ಹತ್ತಿರುವ ಕೆಸರು ಒಣಗಿ ಕೊಳ್ಳತೊಡಗುತ್ತದೆ. ಒಣಗಿದ ಮೇಲೆ ಈ ಮೀನು ಸಂಪೂರ್ಣ ಬಂಧಿ. ಅಲ್ಲಿಂದ ಹೊರ ಬರಬೇಕಾದರೆ ಮತ್ತೊಂದು ಮಳೆ ಬರಬೇಕು. ಒಂದು ವೇಳೆ ಮಳೆ ಬಾರದೆ ಬರಗಾಲ ಆವರಿಸಿದರೆ ಇದು ಸತ್ತಂತೆಯೇ.
ಮೀನು ಹೊರಬರುವುದು ಹೇಗೆ?
ಮುಗುಡು ಮೀನು ಹೊರಬರಬೇಕಾದರೆ ಮಳೆ ಬರಲೇ ಬೇಕು. ಜೋರಾದ ಮಳೆ ಬೀಳುತ್ತಿದ್ದಂತೆ ಒಣಗಿರುವ ಕೆಸರಿಗೆ ನೀರು ಸೇರಿಕೊಳ್ಳಲಾರಂಭಿಸುತ್ತದೆ. ಹೀಗೆ ನೀರು ಬೀಳುತ್ತಾ ಬೀಳುತ್ತಾ ಕೆಸರು ನೀರಿನೊಂದಿಗೆ ಸೇರಿ ಸಡಿಲವಾಗುತ್ತದೆ. ಆಗ ಈ ಮೀನು ಮಿಸುಕಾಡಲಾರಂಭಿಸುತ್ತದೆ. ತನ್ನ ಶರೀರದ ಮೇಲಿ ರುವ ಕೆಸರು ಸಂಪೂರ್ಣವಾಗಿ ಹೊರಹೋದ ಮೇಲೆ ಮೀನು ಸಂಪೂರ್ಣವಾಗಿ ಸ್ವತಂತ್ರವಾದಂತೆಯೇ ಸರಿ. ಆಮೇಲೆ ಈ ಮೀನು ಸುಮ್ಮನಿರುವುದಿಲ್ಲ. ಕೆಸರನ್ನು ತನ್ನಲ್ಲಿರುವ ಚೂಪಾ ಮುಳ್ಳು ಗಳಿಂದ ಕೆಸರನ್ನು ಸರಿಸಿಕೊಂಡು ತೂತು ಮಾಡಿ ಅಲ್ಲಿಂದ ಹೊರಬರುತ್ತದೆ. ಹೊರಬರುವ ಸಂದರ್ಭ ಈ ಮೀನು ಎಷ್ಟು ಖುಷಿಯಾಗಿರುತ್ತದೆಂದರೆ ತನ್ನ ಬಾಯಿಯಿಂದ ಟರ್ರ್ರ್ ಎನ್ನು ಸದ್ದನ್ನು ನಾವು ಸೂಕ್ಷ್ಮವಾಗಿ ಕೇಳಿಸಿಕೊಳ್ಳಬಹುದು. ಸುಮಾರು ಎರಡು ಮೂರು ತಿಂಗಳು ಕೆಸರಿನಲ್ಲಿ ಬಂಧಿಯಾಗಿರುವ ಈ ಮೀನಿಗೆ ಕೆಸರಿನಿಂದ ಹೊರಬಂದ ಮೇಲೆಯೂ ನೆಮ್ಮದಿ ಇರು ವುದಿಲ್ಲ. ಉಬರ್ ಹಿಡಿಯುವವರ ಕಾಟವೂ ಶುರುವಾಗುತ್ತದೆ.
ಉಬರ್ ಹಿಡಿಯುವವರಿಗೂ ಕೂಡಾ ಮೀನು ಜಾಸ್ತಿ ಸಿಗು ವುದು ಮಳೆಗಾಲದ ಮೊದಲ ಜೋರು ಮಳೆಯಂದೇ. ಮೀನು ಹಿಡಿಯುವವರಿಗೂ ಆಹುತಿಯಾಗುವುದು ಇದೇ ಮೀನು. ಒಂದು ವೇಳೆ ಕಡಿಮೆ ಮಳೆ ಬಂದರೆ ಉಬರ್ ಹಿಡಿಯುವವರಿಗೆ ಈ ಮೀನು ಸಿಗುವುದೇ ಇಲ್ಲ. ಹೆಚ್ಚಿನವರು ಈ ಸಂದರ್ಭ ಬರಿಗೈಯಲ್ಲಿ ವಾಪಸಾಗುವ ಘಟನೆಗಳೂ ಇವೆ. ಅರ್ಧ ಕೆಸರಿನಲ್ಲಿ ಹೊರ ಬರಲಾರದೆ ಕೆಲವು ಮೀನುಗಳು ಅರೆಜೀವಾವಸ್ಥೆಗೆ ತಲುಪುತ್ತದೆ. ಇನ್ನು ಕೆಲವು ಇದರಲ್ಲೇ ಸಾಯಲೂಬಹುದು.
ನೀರು ಆವಿಯಾಗುತ್ತಿದ್ದಂತೆ ಜಾಸ್ತಿ ಕೆಸರಾಗುವ ಸಂದರ್ಭದಲ್ಲಿ ಕೆಲವರು ಈ ಮೀನನ್ನು ಬೇಟೆಯಾಡಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಮೀನುಗಳು ಸಿಗುವ ಅವಕಾಶ ಜಾಸ್ತಿ ಇರುತ್ತದೆ. ಯಾಕೆಂದರೆ ಮಳೆ ಕಡಿಮೆಯಾಗುತ್ತಿದ್ದಂತೆ ಈ ಮೀನು ಭೂಗತವಾಗುವ ಸಮಯ. ಇಲ್ಲಿ ಅಳಿದುಳಿದ ಮೀನುಗಳು ಮುಂದಿನ ವರ್ಷದಲ್ಲಿ ವಂಶಾಭಿವೃದ್ಧಿ ಮಾಡಬೇಕು. ಆ ಜಾಗದಿಂದ ಸಂಪೂರ್ಣವಾಗಿ ಈ ಮೀನನನ್ನು ಬೇಟೆ ಯಾಡಿದರೆ ಅದರ ವಂಶ ನಿರ್ವಂಶವಾದಂತೆಯೇ. ಆದರೂ ಕೆಲವೊಂದು ಮೀನುಗಳು ಹೇಗಾದರೂ ಬೇಟೆಯಿಂದ ತಪ್ಪಿಸಿ ಕೊಳ್ಳುತ್ತದೆ.
ಒಂದು ಸಾರಿ ನಾವು ಆವೆ ಮಣ್ಣು ತರಲು ಪಕ್ಕದಲ್ಲಿರುವ ಪಟ್ಲಾಕ್ಕೆ ಹೋಗಿದ್ದೆವು. ಇಡೀ ಊರಿನ ನೆರೆ ಬಂದು ಅಲ್ಲಿಗೆ ಬಂದು ಸೇರಿರುವುದರಿಂದ ಅದನ್ನು ಪಟ್ಲಾ ಎಂದು ಕರೆಯ ಲಾಗುತ್ತದೆ. ಒಮ್ಮೊಮ್ಮೆ ಜಾಸ್ತಿ ಮಳೆ ಬಂದರೆ ಪಟ್ಲಾ ಮುಳುಗಿ ಪಕ್ಕದ ಊರಿಗೂ ನೀರು ಹಬ್ಬುತ್ತದೆ. ಇಡೀ ಊರಿನ ಮರದ ಎಲೆಗಳು ಇನ್ನಿತರ ವಸ್ತುಗಳು ಕೊಚ್ಚಿಕೊಂಡು ಬಂದು ಪಟ್ಲಾದಲ್ಲಿ ಜಮೆಯಾಗುತ್ತದೆ. ಅದು ಅಲ್ಲಿನ ಮಣ್ಣಿನೊಂದಿಗೆ ಸಂಯೋಗ ಗೊಂಡು ಆವೆ ಮಣ್ಣು ತಯಾರಾಗುತ್ತದೆ.
ನಮ್ಮದು ಐದು ಜನರ ತಂಡ. ಆವೆಮಣ್ಣು ಇರುವ ಜಾಗವನ್ನು ಹುಡುಕಿ ಕೊನೆಗೆ ಒಂದು ಸ್ಥಳವನ್ನು ಆಯ್ಕೆ ಮಾಡಿದೆವು. ಮೊದಲೇ ಒಣಗಿದ ಜಾಗ. ಮಣ್ಣು ಒಣಗಿ ಹೋಗಿತ್ತು. ಸಾಧಾರಣವಾಗಿ ನಮ್ಮ ಹಾರೆ ಪಿಕಾಸುಗಳ ಪೆಟ್ಟು ಸಹ ಮಣ್ಣಿಗೆ ತಾಗುತ್ತಿರಲಿಲ್ಲ. ಆದ್ದರಿಂದ ನಾವು ಬಹಳ ತ್ರಾಸದಿಂದ ಮಣ್ಣನ್ನು ಕೊರೆಯ ಬೇಕಾಯಿತು.
ನಾವು ಹಾರೆಯಿಂದ ಮಣ್ಣು ತೆಗೆಯುತ್ತಿದ್ದಂತೆ ಒಂದು ಭಾಗದಲ್ಲಿ ರಕ್ತ ಒಸರಲಾರಂಭಿಸಿತು. ಯಾವುದೋ ಕೇರೆ ಹಾವು ಹಾರೆಯ ಪೆಟ್ಟಿಗೆ ತಗುಲಿ ತುಂಡಾಯಿತೆಂದು ಭಾವಿಸಿ ನಾವು ಗೊಂದಲದಿಂದ ಅತ್ತ ಹೋದರೆ ಕೆಸರು ಮೆತ್ತಿಕೊಂಡ ಮುಗುಡು ಮೀನು ತುಂಡಾಗಿ ಬಿದ್ದಿತ್ತು. ನಾವು ಇದೇ ರೀತಿ ಮಣ್ಣು ಅಗೆಯುತ್ತಿದ್ದಂತೆ ಹಲವಾರು ಮೀನುಗಳು ನಮ್ಮ ಹಾರೆಗೆ ಆಹುತಿಯಾದವು.
ತನ್ನ ಜೀವ ತುಂಡಾದರೂ ಸಹ ಮುಗುಡು ಮೀನಿನ ಜೀವ ಸುಲಭವಾಗಿ ಹೋಗುವುದಿಲ್ಲ. ಆದರೆ ಮೊದಲೇ ಬೇಸಿಗೆ ಕಾಲ ಆದ್ದರಿಂದ ಈ ಸಂದರ್ಭದಲ್ಲಿ ಈ ಮೀನು ಜೀವಚ್ಛ ವದಂತೆ ಕಂಡುಬಂದಿತು. ಆದ್ದರಿಂದ ನಮಗೆ ಅಲ್ಲಿ ಚುರುಕುತನ ಕಂಡುಬರಲಿಲ್ಲ. ಆದರೂ ದೇಹ ಎರಡು ತುಂಡಾದರೂ ಅದರ ಪ್ರಾಣ ಸುಲಭವಾಗಿ ಹೋಗುವುದಿಲ್ಲ. ಈ ಮೀನುಗಳು ಎಷ್ಟು ಗಟ್ಟಿಗನೆಂದರೆ ಈ ಮೀನುಗಳನ್ನು ಎಷ್ಟು ತುಂಡು ಮಾಡಿದರೂ ಪ್ರತೀ ತುಂಡಿಗೂ ಜೀವವಿದ್ದು ಮಿಸುಕಾಟ ಮಾಡಿಕೊಳ್ಳುತ್ತಿರುತ್ತದೆ. ಮೀನು ಬೇಯುವಾಗಲೂ ಸಹ ಕ್ಷಣಹೊತ್ತು ಒದ್ದಾಟ ನಡೆಸಿ ಕೊನೆಗೆ ಪ್ರಾಣ ಬಿಡುತ್ತದೆ. ಈ ಮೀನುಗಳು ಕೆಲವೊಮ್ಮೆ ನೆಲದ ಮೇಲೆಯೂ ಸಂಚರಿಸುವ ತಾಕತ್ತು ಹೊಂದಿದೆ.
ಈ ಮೀನುಗಳು ಕೋಳಿಗೂಡಿಗೆ ನುಗ್ಗಿ ಕೋಳಿಗಳನ್ನು ಸ್ವಾಹಾ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ನಿಜವಾಗಿಯೂ ಕೋಳಿಗೂಡಿಗೆ ನುಗ್ಗಿ ಕೋಳಿ ಗಳನ್ನು ಕದ್ದುಕೊಂಡು ಹೋಗುವ ಮೀನುಗಳಾದರೆ ಅದು ಹಾವುಮೀನುಗಳು. ನಾಗರಹಾವಿನಂತೆಯೇ ಇರುವ ಈ ಮೀನು ಹಿಮಾಲಯದಿಂದ ಕನ್ಯಾಕುಮಾರಿಗೆ ವಲಸೆ ಹೋಗುತ್ತದೆಂದು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಇದು ಸಿಹಿನೀರಿನ ಮೀನುಗಳಾಗಿರುವುದರಿಂದ ಸಮುದ್ರಕ್ಕೆ ಹೋಗುವುದಿಲ್ಲ. ಆದ್ದರಿಂದ ವರ್ಷಪೂರ್ತಿ ಆಹಾರ ಸಿಗದಿರುವುದರಿಂದ ಇವು ಕೋಳಿಗೂಡಿಗೆ ನುಗ್ಗಿ ಕೋಳಿ ತಿನ್ನುವ ಸಾಧ್ಯತೆ ಹೆಚ್ಚಿದೆ.
ಏನೇ ಆಗಲಿ ತನ್ನ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಗುಡು ಮೀನುಗಳು ಪಡುವ ಪಾಡು ಅಷ್ಟಿಷ್ಟಲ್ಲ. ಚಿಕ್ಕ ಕಷ್ಟ ಬಂತೆಂದು ಕೆರೆಗೋ ಬಾವಿಗೋ ಬಿದ್ದು ಆತ್ಮಹತ್ಯೆಗೆಂದು ಪ್ರಯತ್ನಿಸುವ ಮನುಷ್ಯರಿಗೆ ನೀತಿಪಾಠವನ್ನು ಕಲಿಸುವ ಈ ಮೀನು ನಿಜಕ್ಕೂ ಗ್ರೇಟ್. ಗಿರಿ JAYAKIRANA.
ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿ ಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಸಿಗಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ.
ಜೂನ್ ತಿಂಗಳು ಬರುವ ಮೊದಲ ಮಳೆಗೆ ಊರಿನ ಯುವಕ ರೆಲ್ಲಾ ಸೇರಿಕೊಂಡು ಉಬರ್ ಹಿಡಿಯಲು ಹೋಗುತ್ತಾರೆ. ಜೋರಾಗಿ ನೆರೆ ಬಂದ್ದಿದ್ದರೆ ಉಬರ್ ಸಕ್ಸಸ್ ಎಂದೇ ಅರ್ಥ. ತೋಡಲ್ಲಿ ರಭಸವಾಗಿ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವ ಮಧ್ಯೆ ಮಗುಡು ಮೀನಿನಂತಹ ಹಲವಾರ ಮೀನುಗಳು ಸಂಚಾರ ನಡೆಸುತ್ತಿರುತ್ತದೆ. ಅದನ್ನು ಹಿಡಿಯುವುದೇ ಉಬರ್ ಹೊರಟವರ ಉದ್ದೇಶ. ಮಣ್ಣು ಮಿಶ್ರಿತ ನೀರಲ್ಲಿ ಇಂಥಾ ಮೀನುಗಳು ಕಾಣ ಸಿಗುವುದೇ ಇಲ್ಲ. ಅದಕ್ಕಾಗಿ ಪೆಟ್ರೋಮ್ಯಾಕ್ಸ್ ದೀಪ, ಪ್ರಖರ ಬೆಳಕು ಬೀರುವ ಟಾರ್ಚ್ಲೈಟ್ಗಳನ್ನು ಹಿಡಿದುಕೊಂಡು ಹೋಗು ತ್ತಾರೆ. ಅದರ ಜೊತೆಗೆ ಹರಿತವಾದ ಮಚ್ಚು, ಲಾಂಗುಗಳು. ಕೆಸರು ಮಿಶ್ರಿತ ತೂತುಗಳಿಂದ ಇಂಥಾ ಮೀನುಗಳು ಒಂದೊಂದಾ ಗಿಯೇ ಹೊರಗೆ ಬರುತ್ತಿರುವಂತೆ ಇದನ್ನೇ ಕಾಯುತ್ತಿರುವ ಉಬರ್ ಹಿಡಿಯುವವರು ಮೀನು ಹೊರಬಂದ ತಕ್ಷಣ ತನ್ನ ಹರಿತವಾದ ಕತ್ತಿಯಿಂದ ಆಹುತಿ ಮಾಡಿ ಬಿಡುತ್ತಾರೆ.
ಈ ಮೀನನ್ನು ಹಿಒಡಿಯುವಾಗ ಕೊಂಚ ತಪ್ಪಿದರೂ ಅದರ ಭರ್ಚಿಯಂತಹಾ ಮುಳ್ಳು ತಮ್ಮ ಕೈಗೆ ತಾಗಿ ದೊಡ್ಡದಾದ ಗಾಯ ಮಾಡಿಬಿಡಬಲ್ಲುದು. ಅಷು ಚಾಣಾಕ್ಷರು ಮಾತ್ರ ಉಬರ್ ಹಿಡಿಯ ಬಲ್ಲರು. ಇದರ ಬಗ್ಗೆ ಮಾಹಿತಿ ಇಲ್ಲದವರಿಗೆ ಒಂದು ಮೀನೂ ಸಿಗಲು ಸಾಧ್ಯವೇ ಇಲ್ಲ.
ಮುಗುಡು ಮೀನಿನ ಜಾತಿಗೆ ಸೇರಿದ ಮೀನುಗಳು ಪ್ರಪಂಚದ ಹಲವಾರು ಕಡೆಗಳಲ್ಲಿ ಕಾಣಸಿಗುತ್ತದೆ. ಆದರೆ ದ.ಭಾರತದ ಕರ್ನಾಟಕದ ಹಿನ್ನೀರಿನಲ್ಲಿ ಸಿಗುವ ಈ ಮೀನುಗಳೇ ಬಹಳ ಅಚ್ಚರಿದಾಯಕ ಪ್ರಾಣಿಗಳು. ನಮಗೆ ಗೊತ್ತಿರುವಂತೆ ನದಿ, ತೋಡುಗಳಲ್ಲಿ ವರ್ಷಪೂರ್ತಿ ನೀರಿರುವುದಿಲ್ಲ. ಈ ನೀರಿರದ ಸಂದರ್ಭದಲ್ಲಿ ಇದರಲ್ಲಿರುವ ಮೀನುಗಳು ಎಲ್ಲಿಗೆ ಹೋಗುತ್ತದೆ, ಅದು ಎಲ್ಲಿ ಜೀವಿಸುತ್ತದೆ ಎಂಬ ಸಂಶಯ ನಮ್ಮನ್ನು ಕಾಡುತ್ತದೆ.
ಹೌದು ವಿಷಯ ಇಲ್ಲಿಯೇ ಇರುವುದು. ಮಳೆ ನಿಂತೊಡನೆ ತೋಡು ನದಿ, ಕೊಳಗಳಲ್ಲಿ ನೀರು ಆವಿಯಾಗಿ ಆ ಜಾಗದಲ್ಲಿ ನೀರಿತ್ತೆಂಬುದಕ್ಕೆ ಸಾಕ್ಷಿ ಸಹ ಇರುವುದಿಲ್ಲ. ಆದರೂ ಮಳೆ ಆರಂಭವಾಗುತ್ತಿದ್ದಂತೆ ಎಲ್ಲೋ ಅದೃಶ್ಯವಾಗಿದ್ದ ಈ ಮೀನುಗಳು ಮತ್ತೆ ಅದೇ ಜಾಗದಲ್ಲಿ ಪ್ರತ್ಯಕ್ಷವಾತ್ತದೆ. ಅಷ್ಟೇ ಏಕೆ ಅದರೊಂದಿಗೆ ತನ್ನ ಮರಿಗಳನ್ನೂ ಕಟ್ಟಿಕೊಂಡು ಅಲ್ಲೊಂದು ದೊಡ್ಡ ಸಂಸಾರ ಮಾಡತೊಡಗುತ್ತದೆ. ನೀರಿರುವವರೆಗೆ ಸಂತಸದಿಂದ ಬದುಕುವ ಈ ಜೀವಿಗಳ ಹೋರಾಟಮಯ ಜಿವನ ಆರಂಭವಾಗುವುದು ಅಲ್ಲಿಯ ನೀರು ಸಂಪೂರ್ಣವಾಗಿ ಬತ್ತಿಹೋದ ಮೇಲೆಯೇ.
ನೀರಿರುವ ತಾಣಗಳಲ್ಲಿ ನೀರು ಆವಿಯಾಗುತ್ತಿದ್ದಂತೆ ಕೊಕ್ಕರೆ, ಮಿಂಂಚುಳ್ಳಿ, ಬಕ, ನೀರುಕಾಗೆ ಮುಂತಾದ ಪಕ್ಷಿಗಳು ಅಲ್ಲಿರುವ ಮೀನುಗಳನ್ನು ಸ್ವಾಹಾ ಮಾಡಲು ಶುರುಮಾಡುತ್ತದೆ. ಇದರ ಬಾಯಿಗೆ ಆಹುತಿಯಾಗಿ ಅಳಿದುಳಿದ ಮೀನುಗಳೇ ಮುಂದಿನ ಮಳೆಗಾಲದಲ್ಲಿ ಕಾಣಸಿಗುವ ಮಿನುಗಳು. ಮುಗುಡು ಮೀನಿನ ಮೈಮೇಲೆ ಜೆಲ್ಲಿಯಂತಹಾ ವಸ್ತುವೊಂದಿದೆ. ಇದಿರುವುದರಿಂದಲೇ ಈ ಮೀನನ್ನು ಹಿಡಿದರೆ ನಮಗೆ ಜಾರುವ ಅನುಭವವಾಗುತ್ತದೆ. ಹೀಗಾಗಿ ಈ ಮೀನು ಸುಲಭವಾಗಿ ಇತರ ಪ್ರಾಣಿಗಳ ಬಾಯಿಗೆ ತುತ್ತಾಗುವುದಿಲ್ಲ.
ನೀರು ಆವಿಯಾಗುತ್ತಿದ್ದಂತೆ ಬುದ್ಧಿವಂತಿಕೆ ತೋರಿಸುವ ಈ ಮೀನು ಸುತ್ತಲಿರುವ ಕೆಸರನ್ನು ತನ್ನ ದೇಹದ ಸುತ್ತಾ ಮೆತ್ತಿಕೊಳ್ಳಲು ಸುರುಮಾಡುತ್ತದೆ. ಅಥವಾ ಇದೇ ಮೀನು ಕೆಸರಿರುವ ಜಾಗಕ್ಕೆ ತುರುಕಿಕೊಂಡು ಅಲಿಂದ ಹೊರಬರುವುದೇ ಇಲ್ಲ. ಇದರಲ್ಲೂ ಯಾವುದಾದರೂ ಕೆಲವು ಅದೃಷ್ಟವಂತ ಮೀನುಗಳು ನೀರಿರುವ ಜಾಗಕ್ಕೆ ಬಂದು ತಲುಪುತ್ತದೆ. ಅಲ್ಲೂ ಈ ಮೀನುಗಳು ಬಾಕಿ ಮೀನುಗಳಂತೆ ಈಜಿಕೊಂಡಿರುವುದಿಲ್ಲ. ಯಾವುದಾದರೂ ಒಂದು ಸಂದಿನಲ್ಲೋ ಅಥವಾ ಕೆಸರು ಪ್ರದೇಶದಲ್ಲೋ ಅವಿತುಕೊಂಡಿ ರುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಈ ಮೀನುಗಳನ್ನು ನೋಡು ವುದು ಕಷ್ಟ ಸಾಧ್ಯ.
ಕೆಸರು ಸುತ್ತಲಿರುವ ಕಾರಣ ಮಳೆಗಾಲ ಸಂಪೂರ್ಣ ನಿಂತು ಬಿಸಿಲು ಬೀಳುತ್ತಿದ್ದಂತೆ ಅದರ ಮೇಲೆ ಹತ್ತಿರುವ ಕೆಸರು ಒಣಗಿ ಕೊಳ್ಳತೊಡಗುತ್ತದೆ. ಒಣಗಿದ ಮೇಲೆ ಈ ಮೀನು ಸಂಪೂರ್ಣ ಬಂಧಿ. ಅಲ್ಲಿಂದ ಹೊರ ಬರಬೇಕಾದರೆ ಮತ್ತೊಂದು ಮಳೆ ಬರಬೇಕು. ಒಂದು ವೇಳೆ ಮಳೆ ಬಾರದೆ ಬರಗಾಲ ಆವರಿಸಿದರೆ ಇದು ಸತ್ತಂತೆಯೇ.
ಮೀನು ಹೊರಬರುವುದು ಹೇಗೆ?
ಮುಗುಡು ಮೀನು ಹೊರಬರಬೇಕಾದರೆ ಮಳೆ ಬರಲೇ ಬೇಕು. ಜೋರಾದ ಮಳೆ ಬೀಳುತ್ತಿದ್ದಂತೆ ಒಣಗಿರುವ ಕೆಸರಿಗೆ ನೀರು ಸೇರಿಕೊಳ್ಳಲಾರಂಭಿಸುತ್ತದೆ. ಹೀಗೆ ನೀರು ಬೀಳುತ್ತಾ ಬೀಳುತ್ತಾ ಕೆಸರು ನೀರಿನೊಂದಿಗೆ ಸೇರಿ ಸಡಿಲವಾಗುತ್ತದೆ. ಆಗ ಈ ಮೀನು ಮಿಸುಕಾಡಲಾರಂಭಿಸುತ್ತದೆ. ತನ್ನ ಶರೀರದ ಮೇಲಿ ರುವ ಕೆಸರು ಸಂಪೂರ್ಣವಾಗಿ ಹೊರಹೋದ ಮೇಲೆ ಮೀನು ಸಂಪೂರ್ಣವಾಗಿ ಸ್ವತಂತ್ರವಾದಂತೆಯೇ ಸರಿ. ಆಮೇಲೆ ಈ ಮೀನು ಸುಮ್ಮನಿರುವುದಿಲ್ಲ. ಕೆಸರನ್ನು ತನ್ನಲ್ಲಿರುವ ಚೂಪಾ ಮುಳ್ಳು ಗಳಿಂದ ಕೆಸರನ್ನು ಸರಿಸಿಕೊಂಡು ತೂತು ಮಾಡಿ ಅಲ್ಲಿಂದ ಹೊರಬರುತ್ತದೆ. ಹೊರಬರುವ ಸಂದರ್ಭ ಈ ಮೀನು ಎಷ್ಟು ಖುಷಿಯಾಗಿರುತ್ತದೆಂದರೆ ತನ್ನ ಬಾಯಿಯಿಂದ ಟರ್ರ್ರ್ ಎನ್ನು ಸದ್ದನ್ನು ನಾವು ಸೂಕ್ಷ್ಮವಾಗಿ ಕೇಳಿಸಿಕೊಳ್ಳಬಹುದು. ಸುಮಾರು ಎರಡು ಮೂರು ತಿಂಗಳು ಕೆಸರಿನಲ್ಲಿ ಬಂಧಿಯಾಗಿರುವ ಈ ಮೀನಿಗೆ ಕೆಸರಿನಿಂದ ಹೊರಬಂದ ಮೇಲೆಯೂ ನೆಮ್ಮದಿ ಇರು ವುದಿಲ್ಲ. ಉಬರ್ ಹಿಡಿಯುವವರ ಕಾಟವೂ ಶುರುವಾಗುತ್ತದೆ.
ಉಬರ್ ಹಿಡಿಯುವವರಿಗೂ ಕೂಡಾ ಮೀನು ಜಾಸ್ತಿ ಸಿಗು ವುದು ಮಳೆಗಾಲದ ಮೊದಲ ಜೋರು ಮಳೆಯಂದೇ. ಮೀನು ಹಿಡಿಯುವವರಿಗೂ ಆಹುತಿಯಾಗುವುದು ಇದೇ ಮೀನು. ಒಂದು ವೇಳೆ ಕಡಿಮೆ ಮಳೆ ಬಂದರೆ ಉಬರ್ ಹಿಡಿಯುವವರಿಗೆ ಈ ಮೀನು ಸಿಗುವುದೇ ಇಲ್ಲ. ಹೆಚ್ಚಿನವರು ಈ ಸಂದರ್ಭ ಬರಿಗೈಯಲ್ಲಿ ವಾಪಸಾಗುವ ಘಟನೆಗಳೂ ಇವೆ. ಅರ್ಧ ಕೆಸರಿನಲ್ಲಿ ಹೊರ ಬರಲಾರದೆ ಕೆಲವು ಮೀನುಗಳು ಅರೆಜೀವಾವಸ್ಥೆಗೆ ತಲುಪುತ್ತದೆ. ಇನ್ನು ಕೆಲವು ಇದರಲ್ಲೇ ಸಾಯಲೂಬಹುದು.
ನೀರು ಆವಿಯಾಗುತ್ತಿದ್ದಂತೆ ಜಾಸ್ತಿ ಕೆಸರಾಗುವ ಸಂದರ್ಭದಲ್ಲಿ ಕೆಲವರು ಈ ಮೀನನ್ನು ಬೇಟೆಯಾಡಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಮೀನುಗಳು ಸಿಗುವ ಅವಕಾಶ ಜಾಸ್ತಿ ಇರುತ್ತದೆ. ಯಾಕೆಂದರೆ ಮಳೆ ಕಡಿಮೆಯಾಗುತ್ತಿದ್ದಂತೆ ಈ ಮೀನು ಭೂಗತವಾಗುವ ಸಮಯ. ಇಲ್ಲಿ ಅಳಿದುಳಿದ ಮೀನುಗಳು ಮುಂದಿನ ವರ್ಷದಲ್ಲಿ ವಂಶಾಭಿವೃದ್ಧಿ ಮಾಡಬೇಕು. ಆ ಜಾಗದಿಂದ ಸಂಪೂರ್ಣವಾಗಿ ಈ ಮೀನನನ್ನು ಬೇಟೆ ಯಾಡಿದರೆ ಅದರ ವಂಶ ನಿರ್ವಂಶವಾದಂತೆಯೇ. ಆದರೂ ಕೆಲವೊಂದು ಮೀನುಗಳು ಹೇಗಾದರೂ ಬೇಟೆಯಿಂದ ತಪ್ಪಿಸಿ ಕೊಳ್ಳುತ್ತದೆ.
ಒಂದು ಸಾರಿ ನಾವು ಆವೆ ಮಣ್ಣು ತರಲು ಪಕ್ಕದಲ್ಲಿರುವ ಪಟ್ಲಾಕ್ಕೆ ಹೋಗಿದ್ದೆವು. ಇಡೀ ಊರಿನ ನೆರೆ ಬಂದು ಅಲ್ಲಿಗೆ ಬಂದು ಸೇರಿರುವುದರಿಂದ ಅದನ್ನು ಪಟ್ಲಾ ಎಂದು ಕರೆಯ ಲಾಗುತ್ತದೆ. ಒಮ್ಮೊಮ್ಮೆ ಜಾಸ್ತಿ ಮಳೆ ಬಂದರೆ ಪಟ್ಲಾ ಮುಳುಗಿ ಪಕ್ಕದ ಊರಿಗೂ ನೀರು ಹಬ್ಬುತ್ತದೆ. ಇಡೀ ಊರಿನ ಮರದ ಎಲೆಗಳು ಇನ್ನಿತರ ವಸ್ತುಗಳು ಕೊಚ್ಚಿಕೊಂಡು ಬಂದು ಪಟ್ಲಾದಲ್ಲಿ ಜಮೆಯಾಗುತ್ತದೆ. ಅದು ಅಲ್ಲಿನ ಮಣ್ಣಿನೊಂದಿಗೆ ಸಂಯೋಗ ಗೊಂಡು ಆವೆ ಮಣ್ಣು ತಯಾರಾಗುತ್ತದೆ.
ನಮ್ಮದು ಐದು ಜನರ ತಂಡ. ಆವೆಮಣ್ಣು ಇರುವ ಜಾಗವನ್ನು ಹುಡುಕಿ ಕೊನೆಗೆ ಒಂದು ಸ್ಥಳವನ್ನು ಆಯ್ಕೆ ಮಾಡಿದೆವು. ಮೊದಲೇ ಒಣಗಿದ ಜಾಗ. ಮಣ್ಣು ಒಣಗಿ ಹೋಗಿತ್ತು. ಸಾಧಾರಣವಾಗಿ ನಮ್ಮ ಹಾರೆ ಪಿಕಾಸುಗಳ ಪೆಟ್ಟು ಸಹ ಮಣ್ಣಿಗೆ ತಾಗುತ್ತಿರಲಿಲ್ಲ. ಆದ್ದರಿಂದ ನಾವು ಬಹಳ ತ್ರಾಸದಿಂದ ಮಣ್ಣನ್ನು ಕೊರೆಯ ಬೇಕಾಯಿತು.
ನಾವು ಹಾರೆಯಿಂದ ಮಣ್ಣು ತೆಗೆಯುತ್ತಿದ್ದಂತೆ ಒಂದು ಭಾಗದಲ್ಲಿ ರಕ್ತ ಒಸರಲಾರಂಭಿಸಿತು. ಯಾವುದೋ ಕೇರೆ ಹಾವು ಹಾರೆಯ ಪೆಟ್ಟಿಗೆ ತಗುಲಿ ತುಂಡಾಯಿತೆಂದು ಭಾವಿಸಿ ನಾವು ಗೊಂದಲದಿಂದ ಅತ್ತ ಹೋದರೆ ಕೆಸರು ಮೆತ್ತಿಕೊಂಡ ಮುಗುಡು ಮೀನು ತುಂಡಾಗಿ ಬಿದ್ದಿತ್ತು. ನಾವು ಇದೇ ರೀತಿ ಮಣ್ಣು ಅಗೆಯುತ್ತಿದ್ದಂತೆ ಹಲವಾರು ಮೀನುಗಳು ನಮ್ಮ ಹಾರೆಗೆ ಆಹುತಿಯಾದವು.
ತನ್ನ ಜೀವ ತುಂಡಾದರೂ ಸಹ ಮುಗುಡು ಮೀನಿನ ಜೀವ ಸುಲಭವಾಗಿ ಹೋಗುವುದಿಲ್ಲ. ಆದರೆ ಮೊದಲೇ ಬೇಸಿಗೆ ಕಾಲ ಆದ್ದರಿಂದ ಈ ಸಂದರ್ಭದಲ್ಲಿ ಈ ಮೀನು ಜೀವಚ್ಛ ವದಂತೆ ಕಂಡುಬಂದಿತು. ಆದ್ದರಿಂದ ನಮಗೆ ಅಲ್ಲಿ ಚುರುಕುತನ ಕಂಡುಬರಲಿಲ್ಲ. ಆದರೂ ದೇಹ ಎರಡು ತುಂಡಾದರೂ ಅದರ ಪ್ರಾಣ ಸುಲಭವಾಗಿ ಹೋಗುವುದಿಲ್ಲ. ಈ ಮೀನುಗಳು ಎಷ್ಟು ಗಟ್ಟಿಗನೆಂದರೆ ಈ ಮೀನುಗಳನ್ನು ಎಷ್ಟು ತುಂಡು ಮಾಡಿದರೂ ಪ್ರತೀ ತುಂಡಿಗೂ ಜೀವವಿದ್ದು ಮಿಸುಕಾಟ ಮಾಡಿಕೊಳ್ಳುತ್ತಿರುತ್ತದೆ. ಮೀನು ಬೇಯುವಾಗಲೂ ಸಹ ಕ್ಷಣಹೊತ್ತು ಒದ್ದಾಟ ನಡೆಸಿ ಕೊನೆಗೆ ಪ್ರಾಣ ಬಿಡುತ್ತದೆ. ಈ ಮೀನುಗಳು ಕೆಲವೊಮ್ಮೆ ನೆಲದ ಮೇಲೆಯೂ ಸಂಚರಿಸುವ ತಾಕತ್ತು ಹೊಂದಿದೆ.
ಈ ಮೀನುಗಳು ಕೋಳಿಗೂಡಿಗೆ ನುಗ್ಗಿ ಕೋಳಿಗಳನ್ನು ಸ್ವಾಹಾ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ನಿಜವಾಗಿಯೂ ಕೋಳಿಗೂಡಿಗೆ ನುಗ್ಗಿ ಕೋಳಿ ಗಳನ್ನು ಕದ್ದುಕೊಂಡು ಹೋಗುವ ಮೀನುಗಳಾದರೆ ಅದು ಹಾವುಮೀನುಗಳು. ನಾಗರಹಾವಿನಂತೆಯೇ ಇರುವ ಈ ಮೀನು ಹಿಮಾಲಯದಿಂದ ಕನ್ಯಾಕುಮಾರಿಗೆ ವಲಸೆ ಹೋಗುತ್ತದೆಂದು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಇದು ಸಿಹಿನೀರಿನ ಮೀನುಗಳಾಗಿರುವುದರಿಂದ ಸಮುದ್ರಕ್ಕೆ ಹೋಗುವುದಿಲ್ಲ. ಆದ್ದರಿಂದ ವರ್ಷಪೂರ್ತಿ ಆಹಾರ ಸಿಗದಿರುವುದರಿಂದ ಇವು ಕೋಳಿಗೂಡಿಗೆ ನುಗ್ಗಿ ಕೋಳಿ ತಿನ್ನುವ ಸಾಧ್ಯತೆ ಹೆಚ್ಚಿದೆ.
ಏನೇ ಆಗಲಿ ತನ್ನ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಗುಡು ಮೀನುಗಳು ಪಡುವ ಪಾಡು ಅಷ್ಟಿಷ್ಟಲ್ಲ. ಚಿಕ್ಕ ಕಷ್ಟ ಬಂತೆಂದು ಕೆರೆಗೋ ಬಾವಿಗೋ ಬಿದ್ದು ಆತ್ಮಹತ್ಯೆಗೆಂದು ಪ್ರಯತ್ನಿಸುವ ಮನುಷ್ಯರಿಗೆ ನೀತಿಪಾಠವನ್ನು ಕಲಿಸುವ ಈ ಮೀನು ನಿಜಕ್ಕೂ ಗ್ರೇಟ್. ಗಿರಿ JAYAKIRANA.
PORLUDA MEETING, YENCHA ? OODULE.
People of different profession come together, to attend meeting. Some may not aware of meeting rules, for them, some tips on meeting Etiquette.
1. Be punctual or even better turn up a bit earlier. If this is not possible, arrive at the scheduled time at the latest. But don't be late! If you turn up late, step in quickly and quietly while taking your seat. The less interruption you create the better.
2. Don't interrupt the speaker unless he/she has encouraged open discourse throughout the meeting. Don't interrupt other attendees neither.
3. Speakers at a meeting shall stand up and address chairperson only. Not argue with other members .The chairperson either him self answer the questions or directs other members to answers them.
4. Each member is allowed to speak by chairperson, depending on priority.
5. Don't talk during a meeting with other members. This is disruptive to other attendees and inconsiderate of the speaker.
6. Silence your cell phones. You can either activate a voice mail or forward messages to another phone. If you have forgotten to turn off your phone during the meeting, don't answer it in the middle of the meeting
7. When asking a question, raise your hand, don't just blurt out your question. Hold them until the end of the meeting or other specified time.
8. Don't ask long questions. Break them into several questions and make sure you only ask one question at a time.
9. Listen carefully what the speaker is addressing, the attendees' questions and the answers provided. You surely don't want to ask a question that has already been asked.
10. Stay calm. Don't fidget, tap your pen, play with your fingers, read materials not concerning the meeting or any other act that might distract other attendees. Regardless of how heated the meeting may become, remain always calm.
11. Attend the entire meeting. Unless it is absolutely necessary or you have prior permission, you can leave earlier. Bear in mind, that leaving earlier is disruptive to other attendees and inconsiderate to the speaker.
12. In discussions allow more senior figures to contribute first.
13. Be brief when speaking and make sure what you say is relevant.
14. Don't divulge information to others about a meeting. What has been discussed should be considered as confidential.
15. It is agreed by all members, unruly member can be expelled by chairperson from meeting, for some time being. Chairperson is supreme in meeting, so every member should obey his orders.
16. Follow the agenda. Create an agenda and make sure you distribute it to all participants beforehand. Stick to only what is on the agenda.
17. Conduct yourself professionally. Demonstrate your knowledge and understanding.
18. Thank the chairperson for organizing the meeting. It is a sign of respect.
19. If meeting goes off topic, remind the attendees of the agenda at hand and suggest that unrelated matters be addressed at another time.
20. If the meeting is likely to discuss problems, make sure you thought about some solutions to offer.
21. If someone cannot attend the meeting, provide them with all details as to what has been discussed.
22. Every member has rights equal to every other member. Respect for other members, no interrupting, no long monologues, and no personal abuse; allow space for everybody to express their views. And no personal criticism.
23. Responsibility –everybody agrees to take responsibility for timekeeping to the agenda and voicing their opinions rather than afterwards.
24. Decision making-how are decisions to be made, by consensus or voting? If consensus can’t be achieved, at what point will alternative methods be used? Who will decide?
Watch this video. https://www.youtube.com/watch?v=Po0UORfaA74
SADANAND D MOOLYA.
People of different profession come together, to attend meeting. Some may not aware of meeting rules, for them, some tips on meeting Etiquette.
1. Be punctual or even better turn up a bit earlier. If this is not possible, arrive at the scheduled time at the latest. But don't be late! If you turn up late, step in quickly and quietly while taking your seat. The less interruption you create the better.
2. Don't interrupt the speaker unless he/she has encouraged open discourse throughout the meeting. Don't interrupt other attendees neither.
3. Speakers at a meeting shall stand up and address chairperson only. Not argue with other members .The chairperson either him self answer the questions or directs other members to answers them.
4. Each member is allowed to speak by chairperson, depending on priority.
5. Don't talk during a meeting with other members. This is disruptive to other attendees and inconsiderate of the speaker.
6. Silence your cell phones. You can either activate a voice mail or forward messages to another phone. If you have forgotten to turn off your phone during the meeting, don't answer it in the middle of the meeting
7. When asking a question, raise your hand, don't just blurt out your question. Hold them until the end of the meeting or other specified time.
8. Don't ask long questions. Break them into several questions and make sure you only ask one question at a time.
9. Listen carefully what the speaker is addressing, the attendees' questions and the answers provided. You surely don't want to ask a question that has already been asked.
10. Stay calm. Don't fidget, tap your pen, play with your fingers, read materials not concerning the meeting or any other act that might distract other attendees. Regardless of how heated the meeting may become, remain always calm.
11. Attend the entire meeting. Unless it is absolutely necessary or you have prior permission, you can leave earlier. Bear in mind, that leaving earlier is disruptive to other attendees and inconsiderate to the speaker.
12. In discussions allow more senior figures to contribute first.
13. Be brief when speaking and make sure what you say is relevant.
14. Don't divulge information to others about a meeting. What has been discussed should be considered as confidential.
15. It is agreed by all members, unruly member can be expelled by chairperson from meeting, for some time being. Chairperson is supreme in meeting, so every member should obey his orders.
16. Follow the agenda. Create an agenda and make sure you distribute it to all participants beforehand. Stick to only what is on the agenda.
17. Conduct yourself professionally. Demonstrate your knowledge and understanding.
18. Thank the chairperson for organizing the meeting. It is a sign of respect.
19. If meeting goes off topic, remind the attendees of the agenda at hand and suggest that unrelated matters be addressed at another time.
20. If the meeting is likely to discuss problems, make sure you thought about some solutions to offer.
21. If someone cannot attend the meeting, provide them with all details as to what has been discussed.
22. Every member has rights equal to every other member. Respect for other members, no interrupting, no long monologues, and no personal abuse; allow space for everybody to express their views. And no personal criticism.
23. Responsibility –everybody agrees to take responsibility for timekeeping to the agenda and voicing their opinions rather than afterwards.
24. Decision making-how are decisions to be made, by consensus or voting? If consensus can’t be achieved, at what point will alternative methods be used? Who will decide?
Watch this video. https://www.youtube.com/watch?v=Po0UORfaA74
SADANAND D MOOLYA.